





ಪುತ್ತೂರು: ಮಂಗಳೂರಿನ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಘ ಪಿಲಿಕುಳದಲ್ಲಿ, ನ.8ರಂದು ನಡೆದ ಗೀತಾ ಗಾಯನ ಸ್ಪರ್ಧೆಯಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಕಬ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿರುವರು.



4ನೇ ತರಗತಿಯ ಕಬ್ ವಿದ್ಯಾರ್ಥಿಗಳಾದ ಶೌರ್ಯ ಕಾರ್ತಿಕೇಯ, ಆಯುಷ್ ಕೆ.ಎಂ, ವಿಹಾನ್ ಎಲ್, ಧನ್ವಿತ್ ಎಂ. ಎನ್., ಪ್ರಸಿದ್ಧ ಕೃಷ್ಣ ಆರ್ ನಾಯ್ಕ್, ಆಶಯ್ ಜಿ. ಸಿ, ಇವರು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ ಹಾಗೂ ಈ ವಿದ್ಯಾರ್ಥಿಗಳಿಗೆ ಕಬ್ ಶಿಕ್ಷಕಿ ಸ್ವಾತಿ ಕೆ. ಇವರು ಮಾರ್ಗದರ್ಶನವನ್ನು ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.














