BSF ಯೋಧ ಶ್ರೀಜಿತ್ ನೆಲ್ಯಾಡಿ ಸೇವಾ ನಿವೃತ್ತಿ

0

ನೆಲ್ಯಾಡಿ: ಭಾರತೀಯ ಭೂಸೇನಾ ಯೋಧ ಶ್ರೀಜಿತ್ ನೆಲ್ಯಾಡಿ ಅವರು ಆ.31ರಂದು ಸೇವೆಯಿಂದ ನಿವೃತ್ತಿಯಾದರು. ಇವರು 21 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ.

2002ರಲ್ಲಿ ಜಮ್ಮುವಿನಲ್ಲಿ ಸೇನೆಗೆ ಸೇರ್ಪಡೆಗೊಂಡು ಆ ಬಳಿಕ ಕೊಲ್ಕತ್ತಾ, ತ್ರಿಪುರ, ದೆಹಲಿ, ಛತ್ತೀಸ್ ಘಡ, ರಾಜಸ್ಥಾನದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಎನ್ ಎಸ್ ಜಿ ಕಮಾಂಡೋ ಪಡೆಯಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದರು. ಇವರು ಮೂಲತಃ ಹಾಸನ ನಿವಾಸಿ ದಿ.ಸುರೇಂದ್ರನ್ ಹಾಗೂ ವಿಲಾಸಿನಿ ದಂಪತಿ ಪುತ್ರ. ಪ್ರಸ್ತುತ ನೆಲ್ಯಾಡಿ ಗ್ರಾಮದ ಪಡ್ಡಡ್ಕ ನಿವಾಸಿಯಾಗಿದ್ದು, ಇವರ ಪತ್ನಿ ಮಂಜುಳಾ ಎಂ.ಎಸ್ ಅವರು ಕೌಕ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದಾರೆ. ಪುತ್ರಿ ವರ್ಣಿಕ ನೆಲ್ಯಾಡಿ ಬೆಥನಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here