ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಅನುಷ್ಠಾನದಲ್ಲಿರುವ ಯೋಜನೆಗಳು

* ಸಮಗ್ರ ಶಿಶು ಅಭಿವೃದ್ಧಿ ಯೋಜನೆ: 6 ತಿಂಗಳಿಂದ 6 ವರ್ಷದ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ, ಹಾಗೂ ಕಿಶೋರಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

ಸೇವೆಗಳು –

* ಪೂರಕ ಪೌಷ್ಠಿಕ ಆಹಾರ

* ಶಾಲಾ ಪೂರ್ವ ಶಿಕ್ಷಣ

* ಆರೋಗ್ಯ ತಪಾಸಣೆ

* ಚುಚ್ಚುಮದ್ದಿನ ಕಾರ್‍ಯಕ್ರಮ

* ಮಾಹಿತಿ ಸೇವೆ

* ಆಹಾರ ಪೌಷ್ಠಿಕಾಹಾರ ಶಿಕ್ಷಣ

* ಭಾಗ್ಯಲಕ್ಷ್ಮೀ ಯೋಜನೆ: ಈ ಯೋಜನೆಯಡಿ ಬಿಪಿಎಲ್ ಕಾರ್ಡ್ ಇದ್ದು ೨ ಮಕ್ಕಳು ಹೊಂದಿರುವ ಕುಟುಂಬದ ೨ ಹೆಣ್ಣು ಮಕ್ಕಳಿಗೆ ಸೌಲಭ್ಯ ನೀಡಲಾಗುವುದು. ಮೊದಲನೇ ಮಗುವಿಗೆ ರೂ. ೧೯೩೦೦/-, ಎರಡನೇ ಮಗುವಿಗೆ ೧೮೩೫೦/- ಎಲ್‌ಐಸಿಯಲ್ಲಿ ತೊಡಗಿಸಲಾಗುವುದು ಹಾಗೂ ೧೮ ವರ್ಷದ ನಂತರ ಮೊದಲ ಮಗುವಿಗೆ ೧೦೦೦೯೭/- ಹಾಗೂ ಎರಡನೇ ಮಗುವಿಗೆ ೧೦೦೦೫೨/- ಪರಿಪಕ್ವ ಮೊಬಲಗು ನೀಡಲಾಗುವುದು. ೨ನೇ ಮಗುವಿಗೆ ಶಾಶ್ವತ ಕುಟುಂಬ ಯೋಜನೆ ಕಡ್ಡಾಯ.

* ಮಕ್ಕಳ ರಕ್ಷಣಾ ಘಟಕ: ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ೧೮ ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣೆ, ಲೈಂಗಿಕ ಅತ್ಯಾಚಾರ, ಮಕ್ಕಳ ಮೇಲೆ ದೌರ್ಜನ್ಯ, ಪಾಲನೆ, ಪೋಷಣೆ ಸಂಬಂಧಿಸಿದಂತೆ ಮಕ್ಕಳಿಗೆ ಸಹಾಯ ಹಸ್ತ ನೀಡುವುದು ಮತ್ತು ಪುನರ್ವಸತಿ ನೀಡುವುದು.

* ಸಾಂತ್ವನ ಯೋಜನೆ: ತಾಲೂಕಿನಲ್ಲಿ ಸಾಂತ್ವನ ಕೇಂದ್ರಕಾರ್‍ಯ ನಿರ್ವಹಿಸುತ್ತಿದ್ದು, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಮುಂತಾದ ವಿವಿಧ ರೀತಿಯ ದೌರ್ಜನ್ಯಕ್ಕೆ ಒಳಗಾದ ೧೮ ವರ್ಷದ ನಂತರದ ಮಹಿಳೆಯರಿಗೆ ಆಪ್ತ ಸಮಾಲೋಚನೆಯೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಾರ್ಯ ಹಾಗೂ ಅಗತ್ಯವಿದ್ದಲ್ಲಿ ರಕ್ಷಣೆ/ಪುನರ್ವಸತಿ ಸೌಲಭ್ಯ. ಒದಗಿಸಲಾಗುತ್ತಿದೆ ಉಚಿತ ಸಹಾಯವಾಣಿ-೧೦೯೧

* ಮಹಿಳಾ ವಿಶೇಷ ಚಿಕಿತ್ಸಾ ಘಟಕ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಒಂದೇ ಸೂರಿನಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸುವ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಉಚಿತ ಸಹಾಯವಾಣಿ-೧೮೧

* ಸ್ಥೈರ್ಯನಿಧಿ ಯೋಜನೆ: ಅತ್ಯಾಚಾರಕ್ಕೊಳಗಾದ ಮತ್ತು ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಚಿಕಿತ್ಸೆಗಾಗಿ ಮತ್ತು ಪರಿಹಾರಧನವನ್ನು ಇಲಾಖಾ ವತಿಯಿಂದ ನೀಡಲಾಗುತ್ತದೆ. ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಬೇಕು.

* ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005: ಈ ಕಾಯ್ದೆಯಡಿ ಕೌಟುಂಬಿಕ ಸಂಬಂಧದಿಂದ ದೈಹಿಕ, ಲೈಂಗಿಕ, ಆರ್ಥಿಕ, ಭಾವನಾತ್ಮಕ ಹಿಂಸೆಗಳನ್ನು ಅನುಭವಿಸುತ್ತಿರುವ ಮಹಿಳೆಯರನ್ನು ಸಂರಕ್ಷಿಸಲಾಗುತ್ತದೆ.ಸದ್ರಿ ಕಾಯ್ದೆಯಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂರಕ್ಷಣಾಧಿಕಾರಿಗಳೆಂದು ನೇಮಿಸಲಾಗಿದ್ದು, ಅವರನ್ನು ಸಂಪರ್ಕಿಸಿ ಕಾಯ್ದೆಯ ಪ್ರಯೋಜನ ಪಡೆಯಬಹುದಾಗಿದೆ.

* ನಿರ್ಗತಿಕ ಕುಟೀರಗಳು: ಅನಾಥ ಮತ್ತು ಏಕಪೋಷಕ ಮಕ್ಕಳಿಗಾಗಿ ಜಿಲ್ಲೆಯಲ್ಲಿ ನಿರ್ಗತಿಕ ಕುಟೀರಗಳನ್ನು ನಡೆಸುತ್ತಿದ್ದು, ಪುನರ್ವಸತಿ ಹಾಗೂ ವಿಧ್ಯಾಭ್ಯಾಸ ಒದಗಿಸಲಾಗುತ್ತದೆ.

* ಉದ್ಯೋಗಿನಿ ಯೋಜನೆ: ಈ ಯೋಜನೆಯಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ತರಭೇತಿ, ಸಾಲ ಮತ್ತು ಸಹಾಯಧನ ಸೌಲಭ್ಯ

* ವಿಕಲಚೇತನರ ಸೌಲಭ್ಯಗಳು: ವಿಕಲಚೇತನರಿಗೆ ಸಾಧನ ಸಲಕರಣೆ, ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಹಾಗೂ ಇತರೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ 1090

* ಸ್ತ್ರೀಶಕ್ತಿ ಯೋಜನೆ: ೨೦೦೦-೦೧ರಲ್ಲಿ ಜಾರಿ. ಸದಸ್ಯರಲ್ಲಿ ಉಳಿತಾಯ, ಆಂತರಿಕ ಸಾಲ, ಬ್ಯಾಂಕ್ ಸಾಲ ವ್ಯವಸ್ಥೆ, ಸರಕಾರದಿಂದ ಸುತ್ತುನಿಧಿ, ಅಧಿಕ ಉಳಿತಾಯ ಪ್ರೋತ್ಸಾಹಧನ, ಉತ್ತಮ ಗುಂಪಿಗೆ ಪುರಸ್ಕಾರ, ಕೌಶಲಾಭಿವೃದ್ಧಿ ತರಭೇತಿ ವ್ಯವಸ್ಥೆ ಒದಗಿಸಲಾಗಿದೆ.

* ಸಮೃದ್ಧಿ ಯೋಜನೆ: ಈ ಯೋಜನೆಯಲ್ಲಿ ಬಿ.ಪಿ.ಎಲ್. ಕುಟುಂಬದ ಗ್ರಾಮ ಪಂಚಾಯತ್‌ನಿಂದ ಲೈಸನ್ಸ್ ಹೊಂದಿದ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ಇಲಾಖಾ ವತಿಯಿಂದ ರೂ. ೧೦೦೦೦/- ಸಹಾಯಧನ ನೀಡಲಾಗುವುದು.

* ದತ್ತು ಸ್ವೀಕಾರ ಕೇಂದ್ರಗಳು: ಜಿಲ್ಲೆಗೆ ಒಂದು ಮಕ್ಕಳ ದತ್ತು ಸ್ವೀಕಾರ ಕೇಂದ್ರವಿದ್ದು, ಪುತ್ತೂರಿನ ರಾಮಕೃಷ್ಣ ಸೇವಾಸಮಾಜದಲ್ಲಿ ದತ್ತು ಸ್ವೀಕಾರ ಕೇಂದ್ರವು ಕೆಲಸ ನಿರ್ವಹಿಸುತ್ತಿದೆ.

* ವಿಪರೀತ ಕಡಿಮೆ ತೂಕದ ಮಕ್ಕಳಿಗೆ ವೈದ್ಯಕೀಯ ವೆಚ್ಚ ರೂ. ೨೦೦೦ದ ವರೆಗೆ ಭರಿಸಲಾಗುವುದು. ಹಾಗೂ ಹಾಲು, ಮೊಟ್ಟೆ ಒದಗಿಸಲಾಗುತ್ತಿದೆ.

* ಮಾತೃಪೂರ್ಣ ಯೋಜನೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಾತೃಪೂರ್ಣ ಯೋಜನೆಯನ್ನು ೨೦೧೭ ಅಕ್ಟೋಬರ್ ೦೨ರಿಂದ ಪ್ರಾರಂಭಿಸಲಾಗಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚು ಪೌಷ್ಠಿಕ ಅಂಶಗಳನ್ನು ಒಳಗೊಂಡ ಮದ್ಯಾಹ್ನದ ಪೌಷ್ಠಿಕ ಊಟವನ್ನು ಒದಗಿಸುವುದರ ಮೂಲಕ, ಕಡಿಮೆ ತೂಕದ ಮಕ್ಕಳ ಜನನ, ಅಪೌಷ್ಟಿಕ ಪ್ರಮಾಣ ಕಡಿಮೆ ಮಾಡುವುದು, ರಕ್ತ ಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿಯರ ಪ್ರಮಾಣವನ್ನು ಕಡಿಮೆ ಮಾಡುವುದು, ಗರ್ಭಿಣಿಯರು ಕಬ್ಬಿಣಾಂಶ ಮಾತ್ರೆಗಳನ್ನು ಸೇವಿಸುವುದನ್ನು ಖಚಿತ ಪಡಿಸಿಕೊಳ್ಳುವುದು, ಶಿಶು ಮರಣ, ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ, ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ, ಚುಚ್ಚುಮದ್ದು ಸೇವೆಗಳನ್ನು ಪಡೆದುಕೊಳ್ಳುವುದು. ಗರ್ಭಿಣಿ ಮಹಿಳೆಯರ ತೂಕದ ನಿರ್ವಹಣೆ ಕಡ್ಡಾಯವಾಗಿರುತ್ತದೆ.

* ಮಾತೃವಂದನಾ ಯೋಜನೆ(ಪಿ.ಎಂ.ಎಂ.ವಿ.ವೈ.): ಪ್ರಧಾನ ಮಂತ್ರಿಗಳ ಪ್ಯಾನ್ ಇಂಡಿಯಾ ಅಡಿಯಲ್ಲಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂಬ ಹೊಸ ಯೋಜನೆಯನ್ನು ಘೋಷಿಸಿರುತ್ತಾರೆ. ದಿನಾಂಕ. ೦೧.೦೧.೧೭ ರ ನಂತರದ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ರೂ. ೫೦೦೦/-ಗಳನ್ನು ಮೂರು ಕಂತುಗಳಲ್ಲಿ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುವುದು. ಸದರಿಯೋಜನೆ ಸೌಲಭ್ಯವನ್ನು ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮಹಿಳೆಯ ಮೊದಲ ಪ್ರಸವದಿನ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಪ್ರೋತ್ಸಾಹಧನದ ರೂಪದಲ್ಲಿ ವೇತನ ನಷ್ಡಕ್ಕಾಗಿ ನೀಡುವುದು. ಪ್ರೋತ್ಸಾಹಧನ ನೀಡುವುದರಿಂದ ಗರ್ಭಿಣಿ ಮತ್ತು ಬಾಣಂತಿಯಾರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಕೇಂದ್ರ ರಾಜ್ಯ ಸರ್ಕಾರಿ ನೌಕರರು ಅಥವಾ ಅರೆ ಸರ್ಕಾರಿ ನೌಕರರನ್ನು ಹೊರತು ಪಡಿಸಿ ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರು ಅರ್ಹರು.

* ಗೆಳತಿ ವಿಶೇಷ ಚಿಕಿತ್ಸಾ ಘಟಕ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಅಂದರೆ, ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸು ನೆರವು, ಕಾನೂನು ನೆರವು, ಮತ್ತು ಸಮಾಲೋಚನಾ ವ್ವವಸ್ಥೆಗಳನ್ನು ಒದಗಿಸುವ ಸಲುವಾಗಿ ತಾಲೂಕು ಆಸ್ಪತ್ರೆಯಲ್ಲಿ ಗೆಳತಿ ವಿಶೇಷ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿರುತ್ತದೆ.

ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ದರ್ಬೆ ಪುತ್ತೂರು/ ಮೇಲ್ವಿಚಾರಕಿಯರನ್ನು ಹಾಗೂ ಅಂಗನವಾಡಿ ಕಾರ್‍ಯಕರ್ತೆಯರನ್ನು ಸಂಪರ್ಕಿಸಬಹುದಾಗಿದೆ. ಕಛೇರಿ ದೂರವಾಣಿ ಸಂಖ್ಯೆ: 08251-230388.