ಶ್ರೀ ಗುರುರಾಘವೇಂದ್ರ ಮಠ, ಕಲ್ಲಾರೆ, ಪುತ್ತೂರು. ಫೋನ್:08251-234826

ಪುತ್ತೂರು ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ ದೂರದ ಕಲ್ಲಾರೆಯಲ್ಲಿ ಶ್ರೀಗುರುರಾಘವೇಂದ್ರ ಸ್ವಾಮಿ ಮಠವಿದೆ.
ಈ ಮಠವು ೧೯೭೮ ಎಪ್ರಿಲ್ ೨೩ ಹನುಮಾ ಜಯಂತಿಯಂದು ಪ್ರತಿಷ್ಠಾಪನೆಗೊಂಡಿತು. ಪ್ರತಿ ವರ್ಷ ಗುರು ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವ, ಏಕಾಹ ಭಜನೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ನವಗ್ರಹ ಶಾಂತಿ ಹೋಮ, ರಾಮ ನವಮಿ ಹಾಗೂ ಪ್ರತಿಷ್ಠಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಸ್ತುತ ಮಠದ ಕಾರ್ಯದರ್ಶಿಯಾಗಿ ಯು. ಪೂವಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಎನ್ ಸುಬ್ರಹ್ಮಣ್ಯಂ, ಬೆಟ್ಟ ಈಶ್ವರ ಭಟ್, ಲೋಕೇಶ್ ಹೆಗ್ಡೆ, ಗಣಪತಿ ನಾಯಕ್, ಕೆ. ವಾಸುದೇವ ಶೆಣೈ, ಜಿ.ಎಲ್ ಆಚಾರ್ಯ ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.