ಪುತ್ತೂರು: ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕರಿಸಿದ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರನ್ನು ಮಂದಿರದ ವತಿಯಿಂದ ಜ. 26 ರಂದು ಗೌರವಿಸಲಾಯಿತು. ಮಂದಿರದ ಆಡಳಿತ ಮಂಡಳಿ ಗೌರವ ಸಲಹೆಗಾರ ರಾಜೀವ ರೈ ಕೋರಂಗ, ಕಾರ್ಯದರ್ಶಿ ಶಿವರಾಮ ಗೌಡ ಇದ್ಯಪೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮುಂಡಾಳಗುತ್ತು ಮೋಹನ ಆಳ್ವ, ರಾಘವ ಗೌಡ ಕೆರೆಮೂಲೆ ಉಪಸ್ಥಿತರಿದ್ದರು.