ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್ನ ೨೦೨೧-೨೨ ನೇ ಸಾಲಿನ ಬಸವವಸತಿ ಮತ್ತು ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ವಿಶೇಷ ಗ್ರಾಮ ಸಭೆ ಜ.೨೭ ರಂದು ಕಾವು ಸಮುದಾಯ ಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯಮ್ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ಗೆ ಬಂದಿರುವ ಒಟ್ಟು ೪೦ ಮನೆಗಳಿಗೆ ಫಲಾನುಭವಿಗಳ ಆಯ್ಕೆಯನ್ನು ಸಭೆಯಲ್ಲಿ ನಡೆಸಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳ ಬೇಡಿಕೆ ಹೆಚ್ಚಿದ್ದು, ಇನ್ನೂ ಹೆಚ್ಚು ಮನೆ ನೀಡುವಂತೆ ಸರಕಾರಕ್ಕೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಿ.ಡಿ.ಓ ಪದ್ಮಕುಮಾರಿ, ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಹರೀಶ್ ರೈ ಜಾರತ್ತಾರು, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಶಂಕರ ಕಾವು, ಮೋನಪ್ಪ ಪೂಜಾರಿ ಕಾವು, ಜಯಂತಿ ಪಟ್ಟು ಮೂಲೆ, ಮೀನಾಕ್ಷಿ ಪಾಪೆಮಜಲು, ಅನಿತಾ ಆಚಾರಿ ಮೂಲೆ, ಹೇಮಾವತಿ ಚಾಕೋಟೆ, ವಿನೀತ ಬಳ್ಳಿ ಕಾನ, ಮತ್ತು ಸಿಬ್ಬಂದಿ ಪ್ರಭಾಕರ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ ವಂದಿಸಿದರು.