ಪುತ್ತೂರು:ನಗರದ ಹೊರವಲಯದ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ 14 ಮಕ್ಕಳಿಗೆ ಪವಿತ್ರ ಪರಮಪ್ರಸಾದ ನೀಡುವಿಕೆ ಕಾರ್ಯಕ್ರಮವು ಮೇ 1 ರಂದು ಜರಗಿತು. ಮರೀಲ್ ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್ ರವರು 14 ಕ್ರೈಸ್ತ ಮಕ್ಕಳಾದ ಅವಿನ್ ಪಸನ್ನ(ಅನಿಲ್ ಪಸನ್ನ ಹಾಗೂ ಜ್ಯೋತಿ ನಿಶಾ ಕ್ರಾಸ್ತಾರವರ ಪುತ್ರ), ಶ್ಯಾಲನ್ ಸೆರಾವೋ(ಜೋಸೆಫ್ ಸೆರಾವೋ ಹಾಗೂ ಸವಿತಾ ಸೆರಾವೋರವರ ಪುತ್ರ), ಆರನ್ ಡಿ’ಸೋಜ(ಅಶೋಕ್ ಡಿ’ಸೋಜ ಹಾಗೂ ಲೀನಾ ಕ್ರಾಸ್ತಾರವರ ಪುತ್ರ), ಜೋಯ್ಸನ್ ವಿವಿಯನ್ ಮೆಂಡೋನ್ಸಾ(ಜೆಫ್ರಿ ಮೆಂಡೋನ್ಸಾ ಹಾಗೂ ವಿಕ್ಟೋರಿಯಾ ಜ್ಯೋತಿ ಡಿ’ಸೋಜರವರ ಪುತ್ರ), ಡೆಲಿಶಾ ರೆಬೆಲ್ಲೋ(ಡ್ಯಾನಿ ವಿನೋದ್ ರೆಬೆಲ್ಲೋ ಹಾಗೂ ಐಡಾ ಡಿ’ಕೋಸ್ಟರವರ ಪುತ್ರಿ), ರಿಯಾನ್ನ ಡಿ’ಸೋಜ(ರಿಚರ್ಡ್ ಮ್ಯಾಕ್ಸಿಂ ಡಿ’ಸೋಜ ಹಾಗೂ ಲವೀನಾ ಡಿ’ಸೋಜರವರ ಪುತ್ರಿ),
ರಿಶಲ್ ಮರೀನಾ ಡಿ’ಸೋಜ(ರಾಕೇಶ್ ಮೆಲ್ವಿನ್ ಡಿ’ಸೋಜ ಹಾಗೂ ರಶ್ಮಿ ಮರಿಯಾ ಡಿ’ಕುನ್ಹಾರವರ ಪುತ್ರಿ), ಸಿಯಾನಾ ಅಲ್ವಿಟಾ ಡಿ’ಅಲ್ಮೇಡ(ಸಂತೋಷ್ ಮೆಲ್ವಿನ್ ಡಿ’ಅಲ್ಮೇಡ ಹಾಗೂ ಫ್ಲೇವಿ ಸುನಿತಾ ಪಿರೇರಾರವರ ಪುತ್ರಿ), ಮೆಸಿಕಾ ಆಶ್ನಿ ಲೂವಿಸ್(ಮೈಕಲ್ ಲೂವಿಸ್ ಹಾಗೂ ಅನಿತಾ ಡಿ’ಸೋರವರ ಪುತ್ರಿ), ನೀಕ್ಷಿತಾ ಡಿ’ಸೋಜ(ಪ್ರಕಾಶ್ ಡಿ’ಸೋಜ ಹಾಗೂ ಸುನೀತಾ ಡಿ’ಸೋಜರವರ ಪುತ್ರಿ), ಲೀಶಲ್ ಡಿ’ಅಲ್ಮೇಡ(ಲ್ಯಾನ್ಸಿ ಲೊಟ್ ಡಿ’ಅಲ್ಮೇಡ ಹಾಗೂ ಪವಿತ್ರ ಡಿ’ಅಲ್ಮೇಡರವರ ಪುತ್ರಿ), ಜೆನಿಟ ಸಿಂಧು ಪಸನ್ನ(ಜೀವನ್ ಮೆಲ್ವಿನ್ ಪಸನ್ನ ಹಾಗೂ ಸಬೀನಾ ಸಂಧ್ಯಾ ಪಿಂಟೋರವರ ಪುತ್ರಿ), ಫೆಲ್ಸಿಟ ಜೆನಿಶ್ಮಾ ಕುಟಿನ್ಹಾ(ಮೌರಿಸ್ ಕುಟಿನ್ಹಾ ಹಾಗೂ ಜ್ಯೋತಿ ಕುಟಿನ್ಹಾರವರ ಪುತ್ರಿ), ಪ್ರಿಯಲ್ ರೆಬೆಲ್ಲೋ(ಪ್ರವೀಣ್ ರೆಬೆಲ್ಲೋ ಹಾಗೂ ಜ್ಯೂಲಿಯೆಟ್ ರೆಬೆಲ್ಲೋರವರ ಪುತ್ರಿ)ರವರಿಗೆ ಪವಿತ್ರ ಪರಮಪ್ರಸಾದವನ್ನು ನೀಡಿದರು. ಇತ್ತೀಚೆಗೆ ಗುರುದೀಕ್ಷೆ ಪಡೆದ ಸ್ಥಳೀಯ ಧರ್ಮಗುರು ವಂ|ಐವನ್ ಡಿ”ಸೋಜ, 14 ಕ್ರೈಸ್ತ ಮಕ್ಕಳ ಹೆತ್ತವರು, ಭಕ್ತರೊಂದಿಗೆ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು.