ಪುತ್ತೂರು: ಎರಡು ವರ್ಷಗಳ ಬಳಿಕ ಅಕ್ಷಯ ತೃತೀಯ ಶುಭದಿನದ ಅಂಗವಾಗಿ ಮೇ 3 ರಂದು ಚಿನ್ನಾಭರಣ ಖರೀದಿಸುವಲ್ಲಿ ಜನರು ಹೆಚ್ಚಿನ ಆಸಕ್ತಿ ತೋರಿರುವುದು ಕಂಡುಬಂತು. ಕೋರ್ಟು ರಸ್ತೆಯಲ್ಲಿರುವ ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ ಬೆಳಗ್ಗಿನಿಂದಲೇ ಗ್ರಾಹಕರು ಕಿಕ್ಕಿರಿದಿದ್ದರು.
ವಿಜಿತ್ ಜ್ಯುವೆಲ್ಲರ್ಸ್ ಮ್ಹಾಲಕ ಎ. ಅಚ್ಚುತ ಆಚಾರ್ಯರ ನಗು ಮುಖದ ಸೇವೆಗೆ ಫಿದಾ ಆಗುವ ಗ್ರಾಹಕರು, ಇಲ್ಲಿನ ವಿಶೇಷ ವಿನ್ಯಾಸ ಹಾಗೂ ಗುಣಮಟ್ಟದ ಚಿನ್ನಾಭರಣ, ಅಕ್ಷಯ ವೃದ್ಧಿ ಇತ್ಯಾದಿ ವಿಶೇಷತೆಗಳಿಂದಾಗಿ ಇಲ್ಲಿ ಅಕ್ಷಯ ತೃತೀಯ ದಿನ ಹೊರತಾಗಿಯೂ ಗ್ರಾಹಕರು ತುಂಬಿರುತ್ತಾರೆ.
ಅಕ್ಷಯ ತೃತೀಯ ದಿನದಂದು ಇನ್ನೂ ಹೆಚ್ಚಿನ ಸಮೃದ್ಧಿ ವೃದ್ಧಿಸುವ ನಿಟ್ಟಿನಲ್ಲಿ ಇಲ್ಲಿ ಚಿನ್ನಾಭರಣ ಖರೀದಿಸಲು ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿರುವ ಕಾರಣ ಮಳಿಗೆ ತುಂಬಿ ತುಳುಕುತ್ತಿತ್ತು. ಮಳಿಗೆಯ ಮ್ಹಾಲಕ ಅಚ್ಚು ಆಚಾರ್ಯ, ಲತಾ ಅಚ್ಚುತ ಆಚಾರ್ಯ, ಪುತ್ರ ವಿಜಿತ್ ಆಚಾರ್ಯ, ಪುತ್ರಿ ವಿದ್ಯಾ ಆಚಾರ್ಯ, ಸಿಬ್ಬಂದಿಗಳು ಗ್ರಾಹಕರಿಗೆ ಸೇವೆ ನೀಡಿ ಸತ್ಕರಿಸಿದರು.