ಪುತ್ತೂರು: ನಿವೃತ್ತ ಅರಣ್ಯಾಧಿಕಾರಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಳಮೊಗ್ರು ಗ್ರಾಮದ ಬೊಳ್ಳಾಡಿಯಿಂದ ವರದಿಯಾಗಿದೆ. ಬೊಳ್ಳಾಡಿ ಶೀನಪ್ಪ ಗೌಡ ಪಿ (74 ವ.) ಎಂಬವರು ಜೂ.೦೮ ರಂದು ರಾತ್ರಿ ಸ್ವಗೃಹದಲ್ಲಿ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ ಅರಿಯಡ್ಕ ಸರಕಾರಿ ಶಾಲಾ ಸಹಶಿಕ್ಷಕಿ ಕಮಲಾಕ್ಷಿ ಕೆ, ಪುತ್ರಿಯರಾದ ಯಶಸ್ವಿನಿ ಕೆ.ಎಸ್ (ಕಮ್ಯೂಟಿನಿ ಹೆಲ್ತ್ ಆಫೀಸರ್, ಪ್ರಾಥಮಿಕ ಆರೋಗ್ಯ ಕೇಂದ್ರ ಕುತ್ತೆತ್ತೂರು, ಮಂಗಳೂರು), ಡಾ. ತೇಜಸ್ವಿನಿ ಕೆ.ಎಸ್ (ಫಿಜಿಯೋ ಥೆರಾಪಿಸ್ಟ್ ಎಜೆ ಹಾಸ್ಟಿಟಲ್ ಮಂಗಳೂರು), ಪುತ್ರ ರೋಶನ್ ಕೆ.ಎಸ್ (ಡಿಸೈನ್ ಇಂಜಿನಿಯರ್), ಅಳಿಯ ಧೀರಜ್ (ಇಂಜಿನಿಯರ್ ಎಂಆರ್ಪಿಎಲ್ ಮಂಗಳೂರು), ಸೊಸೆ ಪದ್ಮಶುಭ (ಪೋಸ್ಟಲ್ ಡಿಫಾರ್ಟ್ಮೆಂಟ್ ಪುತ್ತೂರು) ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.