ಪೇರಲ್ತಡ್ಕ; ತೃಪ್ತಿ ನೂತನ ಪ್ರಗತಿಬಂದು ತಂಡ ಉದ್ಘಾಟನೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಪೇರಲ್ತಡ್ಕ ಒಕ್ಕೂಟದಲ್ಲಿ  ತೃಪ್ತಿ ಹೆಸರಿನ ನೂತನ ಪ್ರಗತಿಬಂದು  ತಂಡವನ್ನು ಜೂ.10 ರಂದು ಗೋಳಿಪದವು ಸುಂದರರವರ ಮನೆಯಲ್ಲಿ  ಉದ್ಘಾಟಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ. ಎನ್.ಎಸ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.  ವಲಯ ಮೆಲ್ವೀಚಾರಕ ಶಿವಪ್ಪ ಎಂ.ಕೆ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.ನಂತರ ತಂಡಕ್ಕೆ ದಾಖಲಾತಿ ಪುಸ್ತಕ ಹಸ್ತಾಂತರಿಸಲಾಯಿತು.  ತಂಡದ ಪ್ರಬಂಧಕರಾದ ರಮೇಶ, ಸಂಯೋಜಕರಾದ ಸುರೇಶ, ಕೋಶಾಧಿಕಾರಿ ಸುಂದರ, ಸದಸ್ಯರಾದ ನಾರಾಯಣ, ಬಾಲಕೃಷ್ಣ,ಒಕ್ಕೂಟದ ಮಾಜಿ ಉಪಾಧ್ಯಕ್ಷ ಸುಂದರ, ಅಭಿವೃದ್ಧಿ ಸಂಘದ ಸದಸ್ಯ ಕೃಷ್ಣಪ್ಪ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಲೀಲಾವತಿ.ಡಿ ವಂದಿಸಿದರು.

LEAVE A REPLY

Please enter your comment!
Please enter your name here