ಪುತ್ತೂರು: ಅನಾರೋಗ್ಯದಲ್ಲಿರುವ ಆಟೋ ರಿಕ್ಷಾ ಚಾಲಕ ಬೊಳುವಾರು ಪಾರ್ಕಿನ ಇಬ್ರಾಹಿಂರವರಿಗೆ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಸಂಘದ ಬೆಳ್ಳಿಹಬ್ಬ ಸಮಿತಿಯ ವತಿಯಿಂದ ಜು.08ರಂದು ಅವರ ಮನೆಗೆ ತೆರಳಿ ಒಂದು ತಿಂಗಳಿಗೆ ಉಪಯೋಗುವ ದಿನಸಿ ಸಾಮಾಗ್ರಿಗಳ ವಿತರಿಸಿದರು.
ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷ ಅರವಿಂದ ಪೇರಿಗೇರಿ, ಉಪಾಧ್ಯಕ್ಷ ಉಮೇಶ್ ಚಂದ್ರ, ಪ್ರಧಾನ ಕಾರ್ಯದರ್ಶಿ ತಾರಾನಾಥ ಗೌಡ, ಸಂಘದ ಕಾರ್ಯಧ್ಯಕ್ಷ ಚನಿಯಪ್ಪ ನಾಯ್ಕ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮೊಟ್ಟೆತಡ್ಕ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು ಉಪಸ್ಥಿತರಿದ್ದರು.