ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಘಟನೆ ಜು.9ರಂದು ರಾತ್ರಿ ಟೌನ್ ಬ್ಯಾಂಕ್ ಮುಂಭಾಗದ ಅಂಗಡಿ ಬಳಿಯಲ್ಲಿ ನಡೆದಿದೆ.
ಬಪ್ಪಳಿಗೆ ಸಿಂಗಾಣಿ ಆಶ್ರಯ ಕಾಲೊನಿ ರಘುರವರ ಪುತ್ರ ನಾಗೇಶ(37ವ.) ಹಲ್ಲೆಗೊಳಗಾದವರು. ಆಟೋ ರಿಕ್ಷ ಅ ಚಾಲಕರಾಗಿರುವ ನಾಗೇಶ್ ಮಾರ್ಕೆಟ್ ಬಳಿಯ ಪಾರ್ಕಿಂಗ್ ನಲ್ಲಿ ಬಾಡಿಗೆ ನಡೆಸುತ್ತಿದ್ದರು. ಜು.9ರಂದು ರಾತ್ರಿ ತನ್ನ ಪತ್ನಿಯೊಂದಿಗೆ ಪೇಟೆಗೆ ಬಂದಿದ್ದ ಅವರು ಟೌನ್ ಬ್ಯಾಂಕ್ ಮುಂಭಾಗದಲ್ಲಿರುವ ಅಂಗಡಿಗೆ ತೆರಳಿ ಗುಟ್ಕಾ ಖರೀದಿಸುವ ವೇಳೆ ಒಂದು ಪ್ಯಾಕೆಟ್ ಕೈಯಿಂದ ನೆಲಕ್ಕೆ ಬಿದ್ದಿತ್ತು. ಅದನ್ನು ಅಲ್ಲಿಯೇ ನಿಂತಿದ್ದ ನೆಹರು ನಗರ ರಕ್ತೇಶ್ವರಿ ವಠಾರದ ಪ್ರಸಾದ್ ಯಾನೆ ಚಿನ್ನುರವರು ಕಾಲಿನಿಂದ ತುಳಿದಿದ್ದರು. ಅದು ತಿನ್ನುವಂತದ್ದು ಅದನ್ನು ಯಾಕೆ ತುಳಿಯುವುದು ಯಾಕೆ ಎಂದು ಕೇಳಿದ್ದೇನೆ. ಆಗ ಪ್ರಸಾದ್ ರವರು ಅದನ್ನು ಕೇಳಲು ನೀನು ಯಾರು ಎಂದು ಹೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು ಅವರು ನನಗೆ ಹಲ್ಲೆ ನಡೆಸಿರುವುದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾಗೇಶ್ ತಿಳಿಸಿದ್ದಾರೆ.