ಪುತ್ತೂರು: ಬೀರುಮಲೆ ಪಜ್ಞಾ ಆಶ್ರಮದಲ್ಲಿರುವ ವಿಶೇಷ ಚೇತನರಿಗೆ ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ವತಿಯಿಂದ ಸೇವಾ ರೂಪದಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಯಿತು.
ಕ್ಲಬ್ ಅಧ್ಯಕ್ಷರು ಲಯನ್ ದಯಾನಂದ ರೈ ಮನವಳಿಕೆ, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರು, ಹಾಲಿ ತುಳುನಾಡ ವೈಭವ ಸಂಚಾಲಕ ಹೇಮನಾಥ್ ಶೆಟ್ಟಿ ಕಾವು, ನಿಕಟಪೂರ್ವ ವಲಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಲಯನ್ ಲಯನ್ಸ್ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬ ಇದರ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ವಿಜಯ ಕುಮಾರ್ ಶೆಟ್ಟಿ ಮನವಳಿಕೆ, ವಾಣಿ ಎಸ್ ಶೆಟ್ಟಿ, ನಯನಾ ರೈ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ, ಇಸಾಕ್ ಸಾಲ್ಮರ ಉಪಸ್ಥಿತರಿದ್ದರು. ಪ್ರಜ್ಞಾ ಆಶ್ರಮದ ವ್ಯವಸ್ಥಾಪಕರು ಅಣ್ಣಪ್ಪ ದಂಪತಿ ಸಹಕರಿಸಿದರು.