ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದಲ್ಲಿ ಸೆ.10ರಂದು ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಅರ್ಧ ಏಕಹಾ ಭಜನೆ ಮತ್ತು ಸಾರ್ವಜನಿಕ ಶನಿ ಪೂಜೆ, ಸುಧರ್ಮ ಸಭೆ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನೆಡೆಯಲಿದ್ದು ಈ ಹಿನ್ನಲೆಯಲ್ಲಿ ದೇವಸ್ಥಾನ ಸುತ್ತು ಪೌಳಿಯಲ್ಲಿ ಇದ್ದ ಹುಲ್ಲುಗಳನ್ನು ತೆಗೆದು ಸ್ವಚ್ಛ ಗೊಳಿಸಲಾಯಿತು. ಶನಿಪೂಜಾ ಸಮಿತಿ ಅಧ್ಯಕ್ಷ ಅನಿಲ್ ಕಣ್ಣಾರ್ನೂಜಿ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು, ಶನಿಪೂಜಾ ಸಮಿತಿ ಪ್ರ.ಕಾರ್ಯದರ್ಶಿಯೂ ಆಗಿರುವ ಬಾಲಚಂದ್ರ ಗೌಡ ಕಡ್ಯ, ಸಂಚಾಲಕ ಧನಂಜಯರವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಸಮಿತಿ ಸದಸ್ಯರು ಮತ್ತು ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದ್ದರು.