* ಮೇಜರ್ ಡೋನರ್ ಪಿ.ಡಿ. ಕೃಷ್ಣ ಕುಮಾರ್ ರೈಗೆ ಗೌರವಾರ್ಪಣೆ
ಪುತ್ತೂರು: ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ ಇದರ 2022-23ನೇ ಸಾಲಿನ ನೂತನ ಪದಾದಿಕಾರಿಗಳ ಪದಪ್ರದಾನ ಸಮಾರಂಭ ಜು. 19ರಂದು ರೋಟರಿ ಜಿ.ಎಲ್. ಟ್ರಸ್ಟ್ ಹಾಲ್ನಲ್ಲಿ ನಡೆಯಿತು.
ನೂತನ ಅಧ್ಯಕ್ಷೆ ದೀಪಿಕಾ ಅವರಿಗೆ ಪದಪ್ರದಾನ ಮಾಡಿ ಮಾತನಾಡಿದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ., ದಿನಕ್ಕೆ ಅರ್ಧ ಗಂಟೆಯಷ್ಟು ಕಾಲ ಮೊಬೈಲ್ ಬದಿಗಿಟ್ಟರೂ ದೊಡ್ಡ ಸಂಘಟನೆ ಕಟ್ಟಲು ಸಾಧ್ಯ. ಸಮಾಜಮುಖಿ ಚಿಂತನೆಗೆ ಸಂಘಟನೆಗಳ ಪಾತ್ರ ಬಹಳ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ನಾವು ಹೊರಗಿನ ಅಶುದ್ಧತೆಗಳನ್ನು ಸ್ವಚ್ಛಗೊಳಿಸುವ ಮೊದಲು ನಮ್ಮ ಮನಸ್ಸುಗಳನ್ನು ಸ್ವಚ್ಛಗೊಳಿಸಬೇಕು. ನಾವು ಒಬ್ಬರೂ ಸರಿಯಿದ್ದರೇ, ಸಮಾಜದಲ್ಲಿ ಒಬ್ಬ ಮೂಖ೯ ಕಡಿಮೆಯಾದಂತೆ ಎಂದರು.
ಪುತ್ತೂರು ರೋಟರಿ ಪ್ರಯೊಜಿಸಲ್ಪಡುವ ರೋಟರ್ಯಾಕ್ಟ್ ಕ್ಲಬ್ಗಳ ಮಾರ್ಗದರ್ಶಕರಾದ ಪಿ.ಡಿ. ಕೃಷ್ಣ ಕುಮಾರ್ ರೈ ಅವರನ್ನು ಗೌರವಿಸಲಾಯಿತು. ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷೆ ದೀಪಿಕಾ ಅವರು ಅಭಿನಯಿಸಿದ ನನ್ನರಸಿ ಎಂಬ ಆಲ್ಬಂ ಸಾಂಗ್ನ ಪೋಸ್ಟರನ್ನು ಇದೇ ಸಂದರ್ಭ ಅನಾವರಣಗೊಳಿಸಲಾಯಿತು. ವಲಯ ಪ್ರತಿನಿಧಿ ಸಿಯಕ್, ಪುತ್ತೂರು ರೋಟರಿಯ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ, ಸಂಘ ಸೇವಾ ನಿದೆ೯ಶಕ ಪರಮೇಶ್ವರ ಗೌಡ, ನಿರ್ಗಮಿತ ಸಭಾಪತಿ ಅಶೋಕ್ ಕುಮಾರ್, ನೂತನ ಸಭಾಪತಿ ಸತೀಶ್ ನಾಯಕ್, ನಿರ್ಗಮಿತ ಅಧ್ಯಕ್ಷ ಲಿಕಿತಾ ಹಾಗೂ ಜ್ಯೋತಿಕಾ ಉಪಸ್ಥಿತರಿದ್ದರು.
ಪುತ್ತೂರು ರೋಟರಿ ಕ್ಲಬ್ ಉಪಾಧ್ಯಕ್ಷ ಜೈರಾಜ್ ಭಂಡಾರಿ, ಜೊತೆ ಕಾರ್ಯದಶಿ೯ ಸುಜಿತ್ ರೈ, ಮಾಜಿ ಕಾಯ೯ದಶಿ೯ಗಳಾದ ಶ್ರೀಧರ್ ಗೌಡ, ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾಪತಿ ಪ್ರೀತಾ ಹೆಗ್ಡೆ, ಸದಸ್ಯರಾದ ಹರೀಶ್ ಶಾಂತಿ, ಜಗದೀಶ್ ಆಚಾಯ೯ ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ ಮತ್ತು ಹರ್ಷಿತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಧುಶ್ರೀ ವಂದಿಸಿದರು.