ಪುತ್ತೂರು:ಪುತ್ತೂರು ಬಸ್ ನಿಲ್ದಾಣದ ಸೂಪರ್ ಟವರ್ ಬಳಿ ತುಂಡಾದ ಸ್ಲ್ಯಾಬ್ನಿಂದ ಪಾದಚಾರಿಗಳಿಗೆ ಅಪಾಯ ಸಂಭವಿಸುವ ಮಾಹಿತಿ ಅರಿತು ನಗರಸಭಾ ಸ್ಥಳೀಯ ಸದಸ್ಯ ಶಕ್ತಿ ಸಿನ್ಹಾರವರು ಪೌರ ಕಾರ್ಮಿಕರ ಮೂಲಕ ಬದಲಿ ಸ್ಲ್ಯಾಬ್ ಅಳವಡಿಸಿದ್ದಾರೆ.
ತುಂಡಾದ ಸ್ಲ್ಯಾಬ್ನಿಂದ ಅಪಾಯ ಸಂಭವಿಸುವ ಕುರಿತು ಕಾಮತ್ ಹೊಟೇಲ್ ಮಾಲಕ ದಿನೇಶ್ ಕಾಮತ್ ಸ್ಥಳೀಯ ಕಾರ್ಯಕರ್ತ ದಾಮೋದರ್ ಭಂಡಾರ್ಕರ್ಗೆ ತಿಳಿಸಿದ್ದರು. ಅವರು ನಗರಸಭಾ ಸದಸ್ಯ ಶಕ್ತಿ ಸಿನ್ಹರಿಗೆ ಮಾಹಿತಿ ನೀಡಿದ್ದು ತಕ್ಷಣ ಬದಲಿ ಸ್ಲ್ಯಾಬ್ ಅಳವಡಿಸುವ ಮೂಲಕ ದುರಸ್ತಿ ಕಾಮಗಾರಿ ನಡೆದಿದೆ.