ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂನಲ್ಲಿ ಜು.28ರಂದು ನಡೆಯುತ್ತಿರುವ ಗ್ರಾ.ಪಂ ಸಾಮಾನ್ಯ ಸಭೆಗೆ ಬಿಜೆಪಿ ಬೆಂಬಲಿತ ಸದಸ್ಯರು ಗೈರಾಗಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಾದ ಕುಮಾರನಾಥ ಕರ್ನೂರು, ವೆಂಕಪ್ಪ ನಾಯ್ಕ, ಪ್ರಫುಲ್ಲ, ಪ್ರದೀಪ್ ರೂ, ಚಂದ್ರಹಾಸ, ಶಶಿಕಲಾ, ಸವಿತಾ, ಪೂರ್ಣೇಶ್ವರಿ ಮೊದಲಾದವರು ಸಾಮಾನ್ಯ ಸಭೆಗೆ ಆಗಮಿಸಿಲ್ಲ. ಗೈರು ಹಾಜರಾಗಲು ಕಾರವೇನೆಂದು ತಿಳಿದು ಬಂದಿಲ್ಲ. ಸಭೆ ಕೋರಂ ಅನುಸಾರವಾಗಿ ಮುಂದುವರೆದಿದೆ. ಗ್ರಾ.ಪಂ.ನಲ್ಲಿ ಬಿಜೆಪಿ, ಕಾಂಗ್ರೆಸ್ ಎಂದಿಲ್ಲ. ಕೆಲವು ಸದಸ್ಯರು ಸಭೆಗೆ ಬಾರದಿರುವುದು ನಿಜ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಯಾವುದೂ ನಮಗೆ ಗೊತ್ತಿಲ್ಲ ಎಂದು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ತಿಳಿಸಿದ್ದಾರೆ.