ಪುತ್ತೂರು: ಎಲ್ಲಾ ತರಹದ ಅಲಂಕಾರ ಮೀನುಗಳು ಪಕ್ಷಿಗಳು ಮತ್ತು ಸಾಕು ಪ್ರಾಣಿಗಳ ಮಾರಾಟ ಹಾಗೂ ಅದರ ಭಕ್ಷ್ಯ ವಸ್ತುಗಳ ಮಳಿಗೆಯಾದ ಕಿಂಗ್ಸ್ ಅಕ್ವೇರಿಯಂ ದರ್ಬೆಯಲ್ಲಿ ಶುಭಾರಂಭಗೊಂಡಿತು. ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಈ ಸಂಸ್ಥೆಯು ಎಲ್ಲರ ಅಚ್ಚುಮೆಚ್ಚಿನ ಮಳಿಗೆಯಾಗಿ ಬೆಳೆದು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯನ್ನು ಅಬೂಬಕ್ಕರ್ ಮುಸ್ಲಿಯಾರ್ ಪರ್ಲಡ್ಕರವರು ದುವಾಃ ಆಶೀರ್ವಚನ ನೀಡುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಅಲಿ, ರಹೀಂ, ಸುದರ್ಶನ್ ಎಂಟರ್ಪ್ರೈಸಸ್ನ ಮಾಲಕ ಮನೋಜ್, ಸ್ಮಾರ್ಟ್ ಫ್ಯಾನ್ಸಿ ಗಿಫ್ಟ್ ನ ಮಾಲಕ ವಿನ್ಸೆಂಟ್ ಡಿಸೋಜ, ರಾಘವೇಂದ್ರ ಫ್ರೇಮ್ ವರ್ಕ್ಸ್ ಮಾಲಕ ಅಣ್ಣು ಪೂಜಾರಿ, ನ್ಯೂ ಆಕಾಶ್ ಫೂಟ್ವೇರ್ ಮಾಲಕ ಝಿಯಾದ್, ಅಯ್ಯಂಗಾರ್ ಬೇಕರಿ ಮಾಲಕ ಮಲ್ಲಿಕಾರ್ಜುನ, ಕಾಂಗ್ರೆಸ್ನ ಪದಾಧಿಕಾರಿ ಚಂದ್ರಶೇಖರ್ ಅಶ್ವಿನಿ, ಎಸ್ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಸಿದ್ದಿಕ್, ಪಾದುಕಾ ಫೂಟ್ವೇರ್ನ ಜಯರಾಜ್, ಫಯಾಝ್ ಅಟೋ, ಉಖ್ಖಾನ್, ಸಾಹಿಲ್ಬನ್ನೂರು, ಮೆಹರೂಬ್, ಹಾಶೀಂ ಮೊದಲಾದವರು ಉಪಸ್ಥಿತರ್ದಿರು. ಮ್ಯಾನೆಜರ್ ಮುಸ್ತಫಾ ವಂದಿಸಿದರು.
ಕಿಂಗ್ಸ್ ಅಕ್ವೇರಿಯಂ ಮಾಲಕ ಅಬ್ದುಲ್ ರಹಿಮಾನ್ ಕೂರ್ನಡ್ಕ ಮಾತನಾಡಿ ನಮ್ಮ ಈ ಸಂಸ್ಥೆಯು ದರ್ಬೆ ಫಿಲೋನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಇದೀಗ ಸಂಸ್ಥೆಯನ್ನು ದರ್ಬೆ ಮೊಯಿದ್ದೀನ್ ಬಿಲ್ಡಿಂಗ್ಗೆ ಸ್ಥಳಾಂತರಗೊಳಿಸಿ ಉದ್ಘಾಟಿಸಲಾಗಿದೆ. ಗ್ರಾಹಕರು ಈ ಹಿಂದೆ ಕೊಟ್ಟಂತಹ ಪ್ರೋತ್ಸಾಹ ಮುಂದೆಯೂ ಕೊಡಬೇಕೆಂದು ವಿನಂತಿಸಿದರು. ಇಲ್ಲಿ ಎಲ್ಲಾ ತರಹದ ಅಲಂಕಾರಿಕ ಮೀನುಗಳ, ಪಕ್ಷಿಗಳ, ಸಾಕು ಪ್ರಾಣಿಗಳ ಮಾರಾಟ ಮತ್ತು ಅದರ ಫುಡ್ಗಳು ಹಾಗೂ ಪ್ರಾಣಿ ಪಕ್ಷಿಗಳ ರೋಗ ನಿರೋಧಕ ಮದ್ದುಗಳು ಇಲ್ಲಿ ಲಭ್ಯವಿದೆ ಎಂದು ಹೇಳಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.