ಪುತ್ತೂರು: ಪುತ್ತೂರು ಸಾಲ್ಮರ ಸಂಕೀರ್ತನಾ ನಿಲಯದ ರಾಜೀವಿ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಆ.೭ರಂದು ನೆಲ್ಲಿಕಟ್ಟೆ ಮಾತೃಛಾಯಾ ಸಭಾಭವನದಲ್ಲಿ ನಡೆಯಿತು.
ರಾಜೀವಿ ಅವರ ಭಾವ ಚಿತ್ರದ ಎದುರು ಮನೆಯ ಮಂದಿ ದೀಪ ಪ್ರಜ್ವಲಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜೀವಿ ಅವರ ಪುತ್ರರಾದ ಗಣೇಶ್ ಬೀಡಿ ಸಂಸ್ಥೆಯ ನಿವೃತ ಉದ್ಯೋಗಿ ಪುರುಷೋತ್ತಮ ರಾವ್, ಕೃಷಿಕ ದಿವಾಕರ ರಾವ್, ನಿವೃತ್ತ ಎಆರ್ಎಸ್ಐ ಉಮೇಶ್ ರಾವ್, ಉದ್ಯಮಿ ರವೀಂದ್ರ ರಾವ್, ಪುತ್ರಿಯರಾದ ಯಶೋದಾ, ರೋಹಿಣಿ, ಸೊಸೆಯಂದಿರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಆರಂಭದಲ್ಲಿ ಪುಷ್ಪಾರ್ಚಣೆ ಮಾಡಿದರು. ಬಳಿಕ ಬಂಧು ಬಳಗದವರು ಪುಷ್ಪಾರ್ಚನೆ ಮಾಡುವ ಮೂಲಕ ಮೃತ ಆತ್ಮಕ್ಕೆ ಚಿರಶಾಂತಿ ಕೋರಿದರು.