ಕಾಯಿಮಣ ಕೃಷ್ಣಾಪುರ ಜೋಕಾಲಿ ಬಳಗದ ಅಧ್ಯಕ್ಷರಾಗಿ ಚಂದ್ರಶೇಖರ್ ಮುಂಡಾಲ, ಕಾರ್ಯದರ್ಶಿಯಾಗಿ ಪವನ್ ಮರಕ್ಕಡ

0

ಕಾಣಿಯೂರು: ಕಾಯಿಮಣ ಕೃಷ್ಣಾಪುರ ಜೋಕಾಲಿ ಬಳಗದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಮುಂಡಾಲ, ಕಾರ್ಯದರ್ಶಿಯಾಗಿ ಪವನ್ ಮರಕ್ಕಡರವರನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಸೀತಾರಾಮ ಗೌಡ ಮುಂಡಾಲ, ಪುಟ್ಟಣ್ಣ ಗೌಡ ಪಲಸತ್ತಡಿ, ವೆಂಕಟ್ರಮಣ ಗೌಡ ಕಳುವಾಜೆ, ಕೋಶಾಧಿಕಾರಿಯಾಗಿ ಕೇಶವ ಮರಕ್ಕಡ , ಉಪಾಧ್ಯಕ್ಷರಾಗಿ ಜಯಪ್ರಕಾಶ್ ಕಳುವಾಜೆ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕಲ್ಮಲೆ ಮತ್ತು ದೀಕ್ಷಿತ್ ಮುಂಡಾಲ ಆಯ್ಕೆಯಾಗಿದ್ದಾರೆ.

ಜೋಕಾಲಿ ಬಳಗದ ಮಾಜಿ ಅಧ್ಯಕ್ಷರಾದ ವಿಜೇತ್ ಎಂ.ಎಸ್. ಮುಂಡಾಲ ಮತ್ತು ಕಾರ್ಯದರ್ಶಿ ಅಕ್ಷಯ್ ಕುಂಡಲ ಲೆಕ್ಕಪತ್ರ ಮಂಡಿಸಿ ಅಧಿಕಾರ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಜೋಕಾಲಿ ಬಳಗದ ಸ್ಥಾಪಕಾಧ್ಯಕ್ಷರಾದ ವೆಂಕಟೇಶ್ ಮುಂಡಾಲ, ಸ್ಥಾಪಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಚೆನ್ನಪ್ಪ ಗೌಡ ಮುಂಡಾಲ
ಜಗದೀಶ್ ಮುಂಡಾಲ, ನಿತೀನ್ ಪಲಸತ್ತಡಿ, ಭವಿತ್ ಕಲ್ಮಳೆ,ನಿಶಾಂತ್ ಮುಂಡಾಲ, ಸುರಕ್ಷಿತ್, ಪುನೀತ್, ವಿಜೇತ್ ಕುಂಡಾಲ, ಶರತ್ ಮುಂಡಾಲ, ಪ್ರವೀಣ್ ಮುಂಡಾಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here