ರಾಮಕುಂಜ: ಭಾಗೀರಥಿ ನಿಧನ

0


ರಾಮಕುಂಜ: ನಿವೃತ್ತ ನೌಕಾದಳ ಸೇನಾನಿ ದಿ| ಎನ್ ಚೆನ್ನಪ್ಪ ಗೌಡ ಅವರ ಪತ್ನಿ, ಕಡಬ ತಾಲೂಕಿನ ರಾಮಕುಂಜ ಗ್ರಾಮದ ತಾವೂರು ನಿವಾಸಿ ಭಾಗೀರಥಿ (82ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.12ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ನಿವೃತ್ತ ಮೆರೈನ್ ಆಫಿಸರ್ ನಾಗೇಶ್ ಎನ್.ಸಿ. ಹಾಗೂ ಕಡಬದ ನೋಟರಿ ನ್ಯಾಯವಾದಿ ರಮೇಶ್ ಎನ್.ಸಿ. ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ, ಸಾಹಿತಿ ಟಿ.ನಾರಾಯಣ ಭಟ್ ರಾಮಕುಂಜ, ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಲ ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here