ಕಾಣಿಯೂರಿನಲ್ಲಿ ಮಾಹಿತಿ ಶಿಬಿರ, ಷೇರು ಪತ್ರ ವಿತರಣೆ

0

ಪುತ್ತೂರು: ದಕ್ಷಿಣ ಕನ್ನಡ ತೋಟಗಾರಿಕಾ ಇಲಾಖೆ ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪೆನಿ ನಿಯಮಿತ, ಕುದ್ಮಾರು. ಕಡಬ ತಾಲೂಕು ಇದರ ವತಿಯಿಂದ ಸಮಗ್ರ ಕೃಷಿಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಕಾಣಿಯೂರು ಗ್ರಾಮ ಮತ್ತು ಕಾಯ್ಮಣ ಗ್ರಾಮದ ಸದಸ್ಯರಿಗೆ ಷೇರು ಪತ್ರ ವಿತರಣೆ ಕಾರ್ಯಕ್ರಮವು ಕಾಣಿಯೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು . ಅಧ್ಯಕ್ಷತೆಯನ್ನು ಕಾಣಿಯೂರು ಸವಣೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಗಣೇಶ್ ಉದನಡ್ಕ , ಕೃಷಿಯ ಬಗ್ಗೆ ಮಾಹಿತಿ ನೀಡಲು ನಿವೃತ್ತ ಕಾಫಿ ಬೋರ್ಡ್ ಅಧಿಕಾರಿ ವೆಂಕಟರಾಜ್ ಗೌಡ ಕಡಬ , ಸಂಸ್ಥೆಯ ಕಾಯ್ಮಣ ಗ್ರಾಮದ ನಿರ್ದೇಶಕ ಯಶವಂತ ಕಳುವಾಜೆ, ಕಾಣಿಯೂರು ಗ್ರಾಮದ ನಿರ್ದೇಶಕ ಸುರೇಶ್ ಒಡಬಾಯಿ , ಪಾಲ್ತಾಡಿ ಗ್ರಾಮದ ನಿರ್ದೇಶಕ ಸುಬ್ರಾಯ ಗೌಡ ಪಾಲ್ತಾಡಿ, ಇಕೋವ ಸಂಸ್ಥೆಯ ಸಹ ಸಂಯೋಜಕ ಧರ್ಮೇಂದ್ರ ಗೌಡ ಕಟ್ಟತ್ತಾರು, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿಕೇಶ್ ಗೌಡ ಎಡಮಂಗಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here