![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/08/ramachandra-putturaya.jpg)
ರಾಮಕುಂಜ: ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಅರ್ಚಕ ರಾಮಚಂದ್ರ ಪುತ್ತೂರಾಯ (80ವ.)ರವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.15ರಂದು ಬೆಳಿಗ್ಗೆ ನಿಧನರಾದರು.
ಪುತ್ತೂರು ಸಂಪ್ಯದ ಹೆಸರಾಂತ ಕುಕ್ಕಾಡಿ ಪುತ್ರಾಯ ಮನೆತನದವರಾದ ರಾಮಚಂದ್ರ ಪುತ್ತೂರಾಯ ಅವರು ಪುತ್ತೂರಿನ ಪಿ.ಸಿ. ಪೈ ಕಂಪನಿಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದರು. ಆ ಬಳಿಕ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ ಬಳಿ ಇದ್ದ ಪ್ರೀತಂ ಚಿತ್ರಮಂದಿರವನ್ನು ಹಲವಾರು ವರ್ಷ ನಡೆಸುತ್ತಿದ್ದ ಇವರು ಸಾರ್ವಜನಿಕ ರಂಗದಲ್ಲಿ ಜನಪ್ರಿಯರಾಗಿದ್ದರು. ಹಲವಾರು ವರ್ಷಗಳಿಂದ ಅಸೌಖ್ಯದವರೆಗೂ ಅಂಬಾಸಿಡರ್ ಕಾರು ಓಡಿಸುವಲ್ಲಿ ಸಮರ್ಥರಾಗಿದ್ದರು. ಮೃತರ ಪತ್ನಿ ರಾಮಕುಂಜ ಗ್ರಾಮದ ಪಾದೆ ದಿ.ಬಿ.ವಿ.ಕೇಶವ ಪಾಂಗಣ್ಣಾಯ ಮತ್ತು ಪದ್ಮಾವತಿ ದಂಪತಿಯ ಪುತ್ರಿ ಭವಾನಿ ಪುತ್ರಾಯರವರು ಪುತ್ತೂರಿನ ರೋಟರಿ ಹಾಗೂ ಇನ್ನಿತರ ಮಹಿಳಾ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ದೇಹದಾನ:
ರಾಮಚಂದ್ರ ಪುತ್ತೂರಾಯರ ಆಶಯದಂತೆ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿಗೆ ಅವರ ಕುಟುಂಬಸ್ಥರು ದೇಹ ದಾನ ಮಾಡಿದ್ದಾರೆ.