ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಕಲ್ಲುರ್ಟಿ ದೈವಕ್ಕೆ ಆಟಿ ಅಗೇಲು ಸೇವೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಆ.17ರಂದು ಸಂಜೆ ಶ್ರೀ ಕಲ್ಲುರ್ಟಿ ದೈವಕ್ಜೆ ಆಟಿ ಅಗೇಲು ಕಾರ್ಯಕ್ರಮ ನಡೆಯಿತು.
ಸಂಜೆ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಆಟಿ ಅಗೇಲು ಬಡಿಸಲಾಯಿತು. ಆರಂಭದಲ್ಲಿ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕಲ್ಲೇಗ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಪರಿಚಾರಕರಾಗಿರುವ ಸಮಿತಿ ಸದಸ್ಯ ಜಿನ್ನಪ್ಪ ಗೌಡ ಕಲ್ಲೇಗ ಮತ್ತು ದೈವ ನರ್ತಕ ವಸಂತ ಅವರು ಪ್ರಾರ್ಥನೆ ಮಾಡಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಪ್ರಭು, ರವಿಕಿರಣ್ ನೆಲಪ್ಪಾಲು, ಪ್ರಶಾಂತ್ ಸಜೇಯನಗರ, ಪ್ರಸಾದ್ ಬೀಡಿಗೆ, ಸುನಿತಾ ಶಿವನಗರ, ಮೀನಾಕ್ಷಿ ಡಿ ಗೌಡ, ಮಾಧವ ಪಟ್ಲ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಶಾಂತ್ ಮುರ, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಪ್ರಕಾಶ್ ಕಲ್ಲೇಗ, ಜಯರಾಮ ನೆಲಪ್ಪಾಲು. ಮನೋಹರ್ ಕಲ್ಲೇಗ, ಲೋಕೇಶ್ ಅಜೇಯನಗರ, ತಿಮ್ಮಪ್ಪ ಗೌಡ ಅಜೇಯನಗರ, ಚಂದ್ರಶೇಖರ್ ಕಲ್ಲೇಗ, ಕಬಕ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ಸತೀಶ್ ಶೆಟ್ಟಿ ಕಲ್ಲೇಗ, ಗೋವರ್ಧನ, ದೈವನರ್ತಕರಾದ ಹೊನ್ನಪ್ಪ ಕಲ್ಲೇಗ, ರೋಹಿತ್ ಕಲ್ಲೇಗ ಸಹಿತ ಹಲವರು ಉಪಸ್ಥಿತರಿದ್ದರು.ಅಗೇಲು ಸೇವೆ ಮಾಡಿಸಿದ ಭಕ್ತರು ಸರತಿ ಸಾಲಿನಲ್ಲಿ ಬಂದು ಅಗೇಲು ಸೇವೆ ಪ್ರಸಾದ ಪಡೆದುಕೊಂಡರು.

LEAVE A REPLY

Please enter your comment!
Please enter your name here