ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘ ರಚನೆ

0

ಅಧ್ಯಕ್ಷ: ಯಂ. ಬಾಲಕೃಷ್ಣ ಪ್ರಧಾನ ಕಾರ್ಯದರ್ಶಿ: ಅಬ್ರಹಾಂ.ಯಂ

ಕಡಬ: ದೈಹಿಕ ಶಿಕ್ಷಣ ಶಿಕ್ಷಕ ಸಂಘದ ನೂತನ ಕಡಬ ತಾಲೂಕು ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೊಣಾಲು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ-ಶಿಕ್ಷಕ ಶಿಕ್ಷಕ ಯಂ.ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕೊಂಬಾರು ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬ್ರಹಾಂ ಯಂ. ಅವರು ಆಯ್ಕೆಯಾಗಿದ್ದಾರೆ.
ಖಜಾಂಜಿಯಾಗಿ ಪ್ರೇಮ ರಾಮಕುಂಜ, ಹಿರಿಯ ಉಪಾಧ್ಯಕ್ಷರಾಗಿ ಬೇಬಿ ನೂಜಿಬಾಳ್ತಿಲ, ಉಪಾಧ್ಯಕ್ಷರಾಗಿ ರಾಮಣ್ಣ ಗೌಡ ಹಳೆನೇರಂಕಿ, ರಾಜೇಶ್ ಪದವು, ಜಂಟಿ ಕಾರ್ಯದರ್ಶಿಯಾಗಿ ಸಮದ್ ಕಡಬ, ಲೀಲಾವತಿ ಪಡುಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಕುಶಾಲಪ್ಪ ಪಡುಬೆಟ್ಟು, ಬಾಲಕೃಷ್ಣ ಸವಣೂರು, ಅರುಣ್ ಕಡಬ, ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಮರ್ದಾಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸವಿತಾ ಮರ್ದಾಳ, ಪತ್ರಿಕಾ ಕಾರ್ಯದರ್ಶಿಯಾಗಿ ಹರಿಣಾಕ್ಷಿ ಮರ್ದಾಳ ಗುಡ್ ಶಫರ್ಡ್ ಶಾಲೆ, ಆಂತರಿಕ ಲೆಕ್ಕ ಪರಿಶೋಧಕರಾಗಿ ಜಾನ್ ಕೆ.ಪಿ. ಗೋಳಿತೊಟ್ಟು ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಆಯ್ಕೆ ಪ್ರಕ್ರಿಯೆಯು ಜಿಲ್ಲಾ ಸಂಘದ ಗೌರವ ಸಲಹೆಗಾರ ಶಿವರಾಮ ಏನೆಕಲ್ಲು ಇವರ ಅಧ್ಯಕ್ಷತೆಯಲ್ಲಿ, ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಮೈಸೂರು ವಿಭಾಗೀಯ ಕಾರ್ಯಾಧ್ಯಕ್ಷ ತ್ಯಾಗಂ ಹರೇಕಳ ಅವರು ನೂತನ ಸಮಿತಿಯ ರಚನೆಯ ಪ್ರಕ್ರಿಯೆನ್ನು ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಸೇರಿದಂತೆ ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here