ಬೆಟ್ಟಂಪಾಡಿ: ಅಲ್ಪಕಾಲದ ಅಸೌಖ್ಯದಿಂದ ಮಹಿಳೆ ನಿಧನ

0

ಬೆಟ್ಟಂಪಾಡಿ: ಇಲ್ಲಿನ ಮಿತ್ತಡ್ಕ ಬನಾರಿ ಸತೀಶ್ ಗೌಡ ರವರ ಪತ್ನಿ ಯಶೋಧಾ (39ವ.) ರವರು ಅಲ್ಪಕಾಲದ ಅಸೌಖ್ಯದಿಂದ ಸೆ. 21 ರಂದು ರಾತ್ರಿ ನಿಧನರಾದರು.
ಎರಡು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧಿ ಪಡೆದು ಮನೆಗೆ ಹೋಗಿದ್ದರು. ಸೆ.21 ರಂದು ರಾತ್ರಿ ಊಟ ಮಾಡಿ ಮಲಗಿದ ಮೇಲೆ ಏಕಾಏಕಿ ಆರೋಗ್ಯದಲ್ಲಿ ಏರುಪೇರುಂಟಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಕರ್ತವ್ಯನಿರತ ವೈದ್ಯರು ಪರೀಕ್ಷಿಸಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರೆನ್ನಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಸಾವಿಗೆ ತತ್‌ಕ್ಷಣದ ನಿಖರ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೃತರು ಪತಿ ಸತೀಶ್ ಗೌಡ, ತಾಯಿ ದೇವಕಿ, ಅತ್ತೆ ಸುಬ್ಬಕ್ಕ, ಪುತ್ರಿಯರಾದ ಎರಡು ವರ್ಷ ಪ್ರಾಯದ ಶಿವನ್ಯ, 10 ನೇ ತರಗತಿ ವಿದ್ಯಾರ್ಥಿನಿ ಪಲ್ಲವಿ, ಸಹೋದರರಾದ ಕೇಶವ, ರಾಜೇಶ್, ಸತೀಶ್, ಸಹೋದರಿ ಧರ್ಮವತಿಯವರನ್ನು ಅಗಲಿದ್ದಾರೆ.ಮೃತರ ಮನೆಗೆ ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕೆ., ಸದಸ್ಯರಾದ ಪಾರ್ವತಿ ಗೌಡ, ಎಂ.ಎಸ್. ಗಂಗಾಧರ್, ಮೇಧ ಕನ್‌ಸ್ಟ್ರಕ್ಷನ್ ನ ರಾಮಚಂದ್ರ ಘಾಟೆ, ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕರು ಸೇರಿದಂತೆ ಅನೇಕರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here