ಪುತ್ತೂರು ಕ ಸಾ ಪ ವತಿಯಿಂದ ಉಚಿತ ಕನ್ನಡ ಎಂ.ಎ ಗೆ ಅರ್ಜಿ ಆಹ್ವಾನ

0

ಪುತ್ತೂರು: ಪ್ರಸ್ತುತ ಪದವಿ ವ್ಯಾಸಂಗ ಪೂರೈಸಿ ಆರ್ಥಿಕ ಸಮಸ್ಯೆಯಿಂದ ಉನ್ನತ ವ್ಯಾಸಂಗ ಮಾಡಲು ಅವಕಾಶ ವಂಚಿತ ವಿದ್ಯಾರ್ಥಿಗಳಿಗಾಗಿ ಅಥವಾ ಆಸಕ್ತ ವಿದ್ಯಾರ್ಥಿಗಳಿಗಾಗಿ ದಿನನಿತ್ಯದ ತರಗತಿಗಳಿಗೆ ಹಾಜರಾಗಿ ಕನ್ನಡದಲ್ಲಿ ಎಂ. ಎ ಮಾಡಲು ಪುತ್ತೂರು ತಾಲೂಕಿನಲ್ಲಿರುವ ವಿದ್ಯಾ ಸಂಸ್ಥೆಯೊಂದರಲ್ಲಿ ಅವಕಾಶ ಕಲ್ಪಿಸಲಾಗಿದೆ.ಆರ್ಥಿಕವಾಗಿ ಸಮಸ್ಯೆ ಇರುವ ಬಡ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ವಿದ್ಯಾರ್ಥಿ ವೇತನದ ವ್ಯವಸ್ಥೆ ಮಾಡಲಾಗಿದೆ. ಸಂಖ್ಯೆ ಸೀಮಿತ ಮುಂಚಿತವಾಗಿ ನೋಂದಣಿ ಮಾಡಿದವರಿಗೆ ಅವಕಾಶ.

ಆಸಕ್ತ ವಿದ್ಯಾರ್ಥಿಗಳು ದಿನಾಂಕ 02-10-2023 ಒಳಗಾಗಿ ಈ ವಿದ್ಯಾಸಿರಿ ಯೋಜನೆಯ ಸಂಯೋಜಕರಾದ ಪ್ರೊ.ಸುಬ್ಬಪ್ಪ ಕೈಕಂಬ, ಇವರ ದೂರವಾಣಿ ಸಂಖ್ಯೆ 9448328095
ಯನ್ನು ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



LEAVE A REPLY

Please enter your comment!
Please enter your name here