ಪಾಣೆಮಂಗಳೂರು: ಕೆಟ್ಟುನಿಂತ ಲಾರಿ -ವಾಹನ ಸಂಚಾರದಲ್ಲಿ ವ್ಯತ್ಯಯ

0

ವಿಟ್ಲ:ಪಾಣೆಮಂಗಳೂರು ಸೇತುವೆಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮವಾಗಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆ ಅ.2 ರಂದು ಮಧ್ಯಾಹ್ನ ವೇಳೆ ನಡೆದಿದೆ.


ಲಾರಿಯ ಟಯರ್ ಬ್ಲಾಸ್ಟ್ ಗೊಂಡ ಕಾರಣ ನೇತ್ರಾವತಿ ಸೇತುವೆ ಮಧ್ಯ ಭಾಗದಲ್ಲಿ ಲಾರಿ ನಿಂತಿತ್ತು.ಇದರಿಂದಾಗಿ ಸೇತುವೆ ಉದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತಿತ್ತು. ಬಳಿಕ ಟ್ರಾಫಿಕ್ ಎಸ್.ಐ.ಸುತೇಶ್ ರವರು ಕ್ರೇನ್ ತರಿಸಿ ಲಾರಿಯನ್ನು ಸೇತುವೆಯಿಂದ ಇನ್ನೊಂದು ಬದಿಗೆ ಎಳೆದು ತರುವ ವ್ಯವಸ್ಥೆ ಮಾಡಿದ್ದಾರೆ. ಬಳಿಕ ವಾಹನ‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.ಕಳೆದ ಮೂರು ವಾರಗಳಲ್ಲಿ ಮೂರು ಬಾರಿ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬಂದಿದೆ.

LEAVE A REPLY

Please enter your comment!
Please enter your name here