ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ಪುಣಚ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ 3ಚಿನ್ನ, 3ಬೆಳ್ಳಿ

0

ಪುಣಚ : ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ ಪುಣಚ ಶ್ರೀದೇವಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿ 3ಚಿನ್ನ ಹಾಗೂ 3ಬೆಳ್ಳಿ ಪದಕ ಗಳಿಸಿ ದೆಹಲಿಯಲ್ಲಿ ನಡೆಯುವ ಎಸ್‌.ಜಿ.ಎಫ್.ಐ.ಗೆ ಆಯ್ಕೆಯಾಗಿದ್ದಾರೆ.


9ನೇ ತರಗತಿಯ ಯಶಸ್ವಿ, 7ನೇ ತರಗತಿಯ ವರ್ಷ, ಹಾಗೂ 8ನೇ ತರಗತಿಯ ಚಿದಾನಂದ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನೂ,10ನೇ ತರಗತಿ ಚಿರಸ್ವಿ, 9ನೇ ತರಗತಿ ಚರಣ್ ಕುಮಾರ್, ಹಾಗೂ 9ನೇ ತರಗತಿಯ ಜೀವೇಶ್ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರಥಮ ಸ್ನಾನ ಗಳಿಸಿದ ಯಶಸ್ವಿ , ಹಾಗೂ ವರ್ಷ ರಾಷ್ಟ್ರ ಮಟ್ಟದ ಅತ್ಯುತ್ತಮ ಪೈಟರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ಕರಾಟೆ ಶಿಕ್ಷಕ ದಿನೇಶ ನೀರ್ಕಜೆ, ಹಾಗೂ ಮಂಜುಳ ಕೆ. ವಿಟ್ಲ ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here