ಪ್ರತಿಭಾ ಕಾರಂಜಿ: ಇಂದ್ರಪ್ರಸ್ಥಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಉಪ್ಪಿನಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

ವಿದ್ಯಾರ್ಥಿಗಳಾದ ಎಂ. ಕೆ. ಭಾಮತೀ ಉಪಾಧ್ಯಾಯ ಗಝಲ್‌ನಲ್ಲಿ ಪ್ರಥಮ, ಪ್ರಥ್ವಿ ಪ್ರಭು ರಂಗೋಲಿಯಲ್ಲಿ ಪ್ರಥಮ, ಎಂ. ಕೆ. ಭಾಮತೀ ಉಪಾಧ್ಯಾಯ, ವಿಧಿಶಾ, ಅಲ್ಫಾನ್ ಇಸ್ಮಾಯಿಲ್, ಹೃತಿಕ್ ರೈ, ಕೆ.ಅಭಯ್ ನಾಯಕ್, ಪ್ರಾಂಜಲ್ ಕವ್ವಾಲಿಯಲ್ಲಿ ದ್ವಿತೀಯ, ಸುಹಾಸ್ ಎಂ. ಬನಾಕರ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಆದ್ಯಾ ಭಾವಗೀತೆಯಲ್ಲಿ ಪ್ರಥಮ, ರುಚಿಕಾ ಚಿತ್ರಕಲೆಯಲ್ಲಿ ದ್ವಿತೀಯ, ನೀತುಶ್ರೀ ಜಾನಪದಗೀತೆಯಲ್ಲಿ ದ್ವಿತೀಯ, ಪಿ.ವಿ. ವಿಧಿಶಾ ಕನ್ನಡ ಭಾಷಣದಲ್ಲಿ ತೃತೀಯ, ಸಿಂಚನಾ ಭಟ್ ಹಿಂದಿ ಭಾಷಣದಲ್ಲಿ ತೃತೀಯ, ಮೈನಾಶ್ರೀ ಭರತನಾಟ್ಯದಲ್ಲಿ ತೃತೀಯ ಬಹುಮಾನವನ್ನು ಪಡೆದಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here