ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜಯಂತ ವೈಯವರಿಗೆ ಸನ್ಮಾನ

0

ಕಾಣಿಯೂರು: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶರವೂರು ಇದರ ವತಿಯಿಂದ ನಡೆದ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ ವೈ ಇವರನ್ನು ಸನ್ಮಾನಿಸಲಾಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆರವರು ಜಯಂತ ವೈ ಯವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಂತಿನಗರ ಶಾಲಾ ಮುಖ್ಯಗುರು ಜೇಸಿಐ ತರಬೇತುದಾರ ಪ್ರದೀಪ್ ಬಾಕಿಲ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ ಯೋಗ ತರಬೇತುದಾರ ಸಂತೋಷ್ ಪೆರಿಯಡ್ಕ, ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಶಿಕ್ಷಕಿ ದಿವ್ಯಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೀನಪ್ಪ ಕುಂಬಾರ ಬಾಬು ಮೊಗೇರ, ಲಕ್ಷ್ಮೀ ನಾರಾಯಣ ಕುಂತೂರು, ದೇವಸ್ಥಾನದ ಸಿಬ್ಬಂದಿ ವಿನೋದ್ ಕೊಂಡಾಡಿಕೊಪ್ಪ ಉಪಸ್ಥಿತರಿದ್ದರು.ದಾಮೋದರ ಗೌಡ ಕಕ್ವೆ ಸ್ವಾಗತಿಸಿ, ಶೀನಪ್ಪ ಕುಂಬಾರ ವಂದಿಸಿದರ,.ಲಕ್ಷ್ಮೀನಾರಾಯಣ ಕುಂತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here