ಚಾರ್ವಾಕ ಕೊರಿಯಾನ ಶ್ರೀ ಬ್ರಹ್ಮ ಬೈರ್ದಕಳ ಗರಡಿಯಲ್ಲಿ ಕೋಟಿ ಚೆನ್ನಯರ ದರ್ಶನ ಸೇವೆ

0

ಕಾಣಿಯೂರು: ಶ್ರೀ ಬ್ರಹ್ಮ ಬೈರ್ದಕಳ ಗರಡಿ ಕೋರಿಯಾನ ಚಾರ್ವಕದಲ್ಲಿ ಡಿ 25ರಂದು ವಿಶೇಷ ತಂಬಿಲ ಹಾಗೂ ಕೋಟಿ ಚೆನ್ನಯರ ದರ್ಶನ ಸೇವೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗರಡಿ ಕ್ಷೇತ್ರದ ಗೌರವ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಬ್ರಹ್ಮ ಬೈರ್ದಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಕ್ಷೇತ್ರದ ಟ್ರಸ್ಟಿ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ವಸಂತ ದಲಾರಿ, ಕಾರ್ಯದರ್ಶಿಯಾದ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಶ್ರೇಣಿ ಗರಡಿಯ ಧರ್ಮಪಾಲ ಮನಿಮಜಲು, ಗರಡಿಯ ಲೋಕೇಶ ಟ್ರಸ್ಟಿಗಳಾದ ಪ್ರಸನ್ನ ಅಭಿಕಾರ, ಅಜಿತ್ ನಡುಬೈಲ್, ನಯನ ಕಲಾಯಿ, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷ ನಂದನ್ ಕಜೆ ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here