ಶಾಲಾ‌ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಿ: ಕೆಎಸ್ಆರ್ ಟಿಸಿಗೆ ಸೂಚನೆ ನೀಡಿದ ಶಾಸಕರು

0

ಪುತ್ತೂರು: ಕೆಲವು ರೂಟ್ ಗಳಲ್ಲಿ ಬಸ್ಸು ಹೋಗುತ್ತಿಲ್ಲ ,ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿದೆ. ಯಾವ ರೂಟುಗಳಲ್ಲೂ‌ ಬಸ್ ಸಮಸ್ಯೆ ಆಗಬಾರದು, ಯಾರಿಗೂ ತೊಂದರೆಯಾಗಬಾರದು. ಇದಕ್ಕೆ ಬೇಕಾಗಿ ಏನು ಮಾಡ್ತೀರೋ ಆ ವ್ಯವಸ್ಥೆ ಮಾಡಿ ಎಂದು ಕೆಎಸ್ಆರ್ ಟಿಸಿಗೆ ಶಾಸಕರು ಕೆಡಿಪಿ ಸಭೆಯಲ್ಲಿ‌ ಸೂಚನೆ ನೀಡಿದರು. ವಿಟ್ಲದ ಅಳಿಕೆ, ಪಾಣಾಜೆ ಭಾಗದಲ್ಲಿ‌ ಬಸ್ ಸಮಸ್ಯೆ ಇದೆ. ಸಾಕಷ್ಟು ಬಸ್ ಇದೆ, ಚಾಲಕರೂ ಇದ್ದಾರೆ. ಆದರೆ ನಿರ್ವಾಹಕರ ಕೊರತೆ ಎಂಬ ಮಾಹಿತಿ ಇದ್ದು ‌ನಿರ್ವಾಹಕರ ಸಮಸ್ಯೆಯ ಬಗ್ಗೆ ಸಚಿವರ‌ ಜೊತೆ ಮಾತನಾಡುತ್ತೇನೆ ಎಂದು ಶಾಸಕರು ತಿಳಿಸಿದರು.

LEAVE A REPLY

Please enter your comment!
Please enter your name here