![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬಡಗನ್ನೂರು: ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಪಾದೆಕರ್ಯ ಇದರ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ, ನಾಗ ಪೂಜೆ, ಅಶ್ವತ್ಥ ಪೂಜೆ, ಹರಿಸೇವೆ, ಮಹಾಪೂಜೆ ಮತ್ತು ರಕೇಶ್ವರಿ, ವರ್ಣರ ಪಂಜುರ್ಲಿಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಿತು.
ಫೆ. 24 ರಂದು ಬೆಳಿಗ್ಗೆ ಗಂ 7ರಿಂದ ಶ್ರೀ ಗಣಪತಿ ಹೋಮ, ನಾಗ ತಂಬಿಲ, ಅಶ್ವತ ಪೂಜೆ ಹರಿಸೇವೆ ನಡೆಯಿತು. ಮಧ್ಯಾಹ್ನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮಹಾಪೂಜೆ, ಪ್ರಸಾದ ವಿತರಣೆಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಗಂ 3ಕ್ಕೆ ರಕ್ತಶ್ವರಿ, ವರ್ಣರ ಪಂಜುರ್ಲಿ ಮತ್ತು ಪರಿವಾರ ದೈವಗಳಿಗೆ ತಂಬಲ ಸೇವೆ ನಡೆಯಿತು
![](https://puttur.suddinews.com/wp-content/uploads/2024/02/IMG_20240224_130116.jpg)
ಸಾಂಸ್ಕೃತಿಕ ಕಾರ್ಯಕ್ರಮ;-
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ಗಂ 9 ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂವ ಬೊಳುವಾರು ಪುತ್ತೂರು ಇವರಿಂದ” ಭೀಷ್ಮ ಪ್ರತಿಜ್ಞೆ” ಪೌರಾಣಿಕ ಯಕ್ಷಗಾನ ತಾಳಮದ್ದಾಳೆ ನಡೆಯಿತು
![](https://puttur.suddinews.com/wp-content/uploads/2024/02/IMG_20240224_132413.jpg)
ಈ ಸಂದರ್ಭದಲ್ಲಿ ಪಾದೆಕರ್ಯ ಮನೆತನದ ಯಜಮಾನ ವಿಷ್ಣು ಭಟ್ ಮತ್ತು ಮನೆಯವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.