ಕಡಬ: ಕೆಟ್ಟು ಹೋದ ಉಜ್ರಿಪಾದೆ ರಸ್ತೆ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ-ಪಟ್ಟಣ ಪಂಚಾಯತ್ ಹತ್ತು ಲಕ್ಷ ಅನುದಾನ ಎಲ್ಲಿ ಹೋಯಿತು?- ಗ್ರಾಮಸ್ಥರ ಪ್ರಶ್ನೆ

0

ಕಡಬ:ಕಡಬ -ಪಿಜಕ್ಕಳ ರಸ್ತೆಯನ್ನು ಸಂಪರ್ಕಿಸುವ ಉಜ್ರಿಪಾದೆ, ಪಾಲೋಳಿ, ನೇಲ್ಯಡ್ಕ ಕೊರತ್ತಿಗುರಿ ರಸ್ತೆಯು ತೀವ್ರ ಹದಗೆಟ್ಟಿದ್ದು ಇದರ ದುರಸ್ತಿ ಕಾರ್ಯ ನಡೆಯದೆ ಇದ್ದುದರಿಂದ ಬೇಸತ್ತ ಆ ಭಾಗದ ಗ್ರಾಮಸ್ಥರು ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಬ್ಯಾನರ್ ಅಳವಡಿಸಿದ್ದಾರೆ.


ಉಜ್ರಿಪಾದೆ, ಪಾಲೋಳಿ,ನೇಲ್ಯಡ್ಕ,ಕೊರತ್ತಿಗುರಿ ರಸ್ತೆಯು ಸುಮಾರು ಐವತ್ತಿಕ್ಕಿಂತಲೂ ಹೆಚ್ಚು ಮನೆಗಳಿದ್ದು ಈ ಮನೆಗಳಿಗೆ ಇದೇ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಗೆ ಕಡಬ ಪಟ್ಟಣ ಪಂಚಾಯತ್ ನ 2022-23 ನೇ ಸಾಲಿನ ನಗರೋತ್ಥಾನ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಅನುದಾನ ಇಟ್ಟಿದ್ದರೂ ಆ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಆಕ್ರೋಶಗೊಂಡಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.

LEAVE A REPLY

Please enter your comment!
Please enter your name here