ಆರೆಲ್ತಡಿ ಶಾಲೆಯಲ್ಲಿ ಶ್ರಮದಾನ – ಕೈತೋಟ ರಚನೆ

0

ಸವಣೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿ ಇಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ ಪಟ್ಟೆ ಇವರ ನೇತೃತ್ವದಲ್ಲಿ ಶ್ರಮದಾನ ಮತ್ತು ಕೈತೋಟ ನಿರ್ಮಾಣ ಕಾರ್ಯ ನಡೆಯಿತು.
ಶಾಲಾ ಸುತ್ತಲಿನ ತೆಂಗಿನ ಮತ್ತು ಅಡಿಕೆ ಗಿಡಗಳಿಗೆ ಗೊಬ್ಬರ ಹಾಕುವುದು, ಶಾಲಾ ಪರಿಸರವನ್ನು ಸ್ವಚ್ಛ ಮಾಡುವುದು, ಅಕ್ಷರದಾಸೋಹಕ್ಕೆ ಅಗತ್ಯವಾದ ಕೈತೋಟ ನಿರ್ಮಾಣದ ಕೆಲಸವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಗಾ.ಪಂ.ಸದಸ್ಯರಾದ ತೀರ್ಥರಾಮ ಕೆಡೆಂಜಿ, ಎಸ್ ಡಿಎಂಸಿ ಉಪಾಧ್ಯಕ್ಷರಾದ ಬದ್ರುನ್ನೀಸಾ ಆರೆಲ್ತಡಿ, ಎಸ್ಡಿಎಂಸಿ ಸದಸ್ಯರುಗಳಾದ ನಾರಾಯಣ ಗೌಡ ಕೆಡೆಂಜಿಮಾರ್, ಪುರುಷೋತ್ತಮ ಗೌಡ ಆರೆಲ್ತಡಿ, ಸಿದ್ದಿಕ್ ಆರೆಲ್ತಡಿ, ಮಮತಾ ಆರೆಲ್ತಡಿ, ಜ್ಯೋತಿ ಪಟ್ಟೆ, ಅವ್ವಮ್ಮ ಆರೆಲ್ತಡಿ, ಕುಶಾಲಪ್ಪ ಗೌಡ ಕುದ್ಮನಮಜಲು, ಆಸ್ಮಾಬಿ ಮೊಗರು, ಸಮೀಮಾ ಪಾರೆ, ಸುನೀತಾ ಮಡಕೆ, ಆರೀಸ್ ಪಾರೆ ಮತ್ತು ಆರೆಲ್ತಡಿ ಶಾಲಾ ಹಿರಿಯ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದರು.
ಮುಖ್ಯ ಗುರುಗಳು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here