ಮುಂಡೂರು: ಕುಕ್ಕಿನಡ್ಕ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಮುಂಡೂರು ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ ವಠಾರದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮುರಳೀಧರ ಭಟ್ ಬಂಗಾರಡ್ಕ ನೇತೃತ್ವದಲ್ಲಿ ಆ.8ರಂದು ನಡೆಯಿತು.ದೇವಳದ ಪ್ರಧಾನ ಅರ್ಚಕ ನಾಗೇಶ್ ಕುದ್ರೆತ್ತಾಯರ ದೇವತಾ ಪ್ರಾರ್ಥನೆ ನಡೆಸಿದರು.

ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಗೌರವಾಧ್ಯಕ್ಷ ಸುಧೀರ್ ಶೆಟ್ಟಿ ನೇಸರಕಂಪ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ್ ಗೌಡ ಅಂಬಟ, ಗೌರವ ಸಲಹೆಗಾರ ಬಾಲಕೃಷ್ಣ ಕಣ್ಣಾರಾಯ ಬನೇರಿ, ಮುಂಡೂರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು,ಶ್ರೀ ಕುಕ್ಕಿನಡ್ಕ ದೇವಸ್ಥಾನದ ನಿಕಟ ಪೂರ್ವ ಸದಸ್ಯ ಸದಾಶಿವ ಶೆಟ್ಟಿ ಪಟ್ಟೆ, ರಾಘವೇಂದ್ರ ಪಜಿಮಣ್ಣು, ಸೇಸಪ್ಪ ಶೆಟ್ಟಿ ಪೋನೋಣಿ, ಸಚಿನ್ ಶೆಟ್ಟಿ ಪಟ್ಟೆ, ಬಾಲಕೃಷ್ಣ ಶೆಟ್ಟಿ ಪಂಜಳ, ಸದಾಶಿವ ಗೌಡ ಕೊಡಂಕೀರಿ,

ಶರಣ್, ಶಮಿತ್, ಪ್ರೀತಮ್, ಅಕ್ಷಯ್, ರೋಹಿತ್, ಚಿಂತನ್ ತ್ರಿಶಾನ್, ಸುಶಾಂತ್, ಪ್ರಶಾಂತ್, ಪ್ರವೀಣ್, ಶ್ರೀಮನೋಹರ ರೈ, ದೇವಳದ ವ್ಯವಸ್ಥಾಪಕ ಪ್ರಸಾದ್ ಬೈಪಡಿತ್ತಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here