ನಿವೃತ್ತ ಉಪ ವಲಯಾರಣ್ಯಾಧಿಕಾರಿ ಪದ್ಮನಾಭ ಗೌಡ ಗುತ್ತು ನಿಧನ

0

ಪುತ್ತೂರು:ಶಾಂತಿಗೋಡು ಗ್ರಾಮದ ವೀರಮಂಗಲ ಗುತ್ತು ನಿವಾಸಿ, ಅರಣ್ಯ ಇಲಾಖೆಯ ನಿವೃತ್ತ ಉಪ ವಲಯಾರಣ್ಯಾಧಿಕಾರಿ ಪದ್ಮನಾಭ ಗೌಡರವರು ಅಸೌಖ್ಯದಿಂದ ಆ.20ರಂದು ಸ್ವಗೃಹದಲ್ಲಿ ನಿಧನರಾದರು.
ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕರಾಗಿ ನೇಮಕಗೊಂಡು ನಂತರ ಉಪವಲಯಾರಣ್ಯಾಧಿಕಾರಿಯಾಗಿ ಪದೋನ್ನತಿ ಪಡೆದಿದ್ದರು. ಸುಳ್ಯ, ಪಂಜ, ಬಳ್ಪ, ಉಕ್ಕುಡ ಗೇಟ್, ಸುಬ್ರಹ್ಮಣ್ಯ ಗೇಟ್, ಕುಂದಾಪುರ ಹಾಗೂ ಪಣಂಬೂರಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರ ಚಿದಾನಂದ, ಪುತ್ರಿಯರಾದ ಜಾನಕಿ ಹಾಗೂ ಕವಿತಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here