ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ರಿಕ್ಷಾ-ವಿಚಾರಿಸಿದ ಕಾರಲ್ಲಿದ್ದವರಿಗೆ ಮಹಿಳೆಯಿಂದ ಹಲ್ಲೆ-ದೂರು

0

ಪುತ್ತೂರು:ಏಕಮುಖ ರಸ್ತೆಯಲ್ಲಿ ವಿರುದ್ಧ ಧಿಕ್ಕಿನಿಂದ ಬಂದ ಆಟೋ ರಿಕ್ಷಾದ ಕುರಿತು ಕಾರೊಂದರಲ್ಲಿದ್ದವರು ವಿಚಾರಿಸುತ್ತಿದ್ದ ವೇಳೆ ಈ ಘಟನೆಗೆ ಸಂಬಂಧವೇ ಇಲ್ಲದ ಮಹಿಳೆಯೊಬ್ಬರು ಪಕ್ಕದ ಅಂಗಡಿಯಿಂದ ಹೊರ ಬಂದು ಕಾರಿನಲ್ಲಿದ್ದ ಓರ್ವರಿಗೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಆ.22ರ ರಾತ್ರಿ ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಬೆಟ್ಟಂಪಾಡಿ ಮೂಲದ ನಾಲ್ವರು ಹಿಂದು ಕಾರ್ಯಕರ್ತರು ಪುತ್ತೂರು ಮೊಸರುಕುಡಿಕೆ ಉತ್ಸವಕ್ಕೆ ಮಡಿಕೆಯನ್ನು ತಂದು ಪುತ್ತೂರು ಕಾರ್ಯಾಲಯದಲ್ಲಿ ಇರಿಸಿ ಹಿಂತಿರುಗಿ ಮನೆ ಕಡೆಗೆ ಹೋಗಲೆಂದು ಕೋರ್ಟ್ ರಸ್ತೆಯಿಂದ ಮುಖ್ಯರಸ್ತೆಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಮುಖ ರಸ್ತೆಯಲ್ಲಿ ವಿರುದ್ಧ ಧಿಕ್ಕಿನಿಂದ ಅವರ ಕಾರಿಗೆ ಎದುರಾಗಿ ಆಟೋ ರಿಕ್ಷಾವೊಂದು ಬರುತ್ತಿದ್ದುದನ್ನು ವಿಚಾರಿಸಿದ್ದಾರೆ.

ಇದೇ ವೇಳೆ ಅದೇ ರಸ್ತೆ ಪಕ್ಕದ ಅಂಗಡಿಯಿಂದ ಹೊರ ಬಂದ ಮುಸ್ಲಿಂ ಮಹಿಳೆಯೋರ್ವರು ಕಾರಿನಲ್ಲಿದ್ದ ಓರ್ವನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಇದೇ ಸಂದರ್ಭ ರಿಕ್ಷಾ ಚಾಲಕನೂ ಪರಾರಿಯಾಗಿರುವುದಾಗಿ ಕಾರಿನಲ್ಲಿದ್ದವರ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here