ಕ್ರೀಡಾಕೂಟ: ಅಂಬಿಕಾ ವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ದೃಶಾನ ಸುರೇಶ ಸರಳಿಕಾನ ಇವರು ಆಂದ್ರಪ್ರದೇಶದ ವಿಜಯವಾಡದಲ್ಲಿ ಸೆ.13ರಿಂದ 15ರವರೆಗೆ ನಡೆದ ವಿದ್ಯಾಭಾರತಿ ಮಧ್ಯಕ್ಷೇತ್ರ ಮಟ್ಟದ ಅಥ್ಲೇಟಿಕ್‌ನ 14 ವಯೋಮಿತಿ ಒಳಗಿನ ( ಬಾಲವರ್ಗ) ಸ್ಪರ್ಧೆಯಲ್ಲಿ 100 ಮೀಟರ್ ಹಾಗೂ 200 ಮೀಟರ್ ಓಟ, 4×100 ರಿಲೇ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಬೆಟ್ಟಂಪಾಡಿಯ ಸುರೇಶ ಗೌಡ ಸರಳಿಕಾನ ಮತ್ತು ವಿದ್ಯಾಶ್ರೀ ದಂಪತಿಯವರ ಮಗಳಾಗಿರುತ್ತಾರೆ. ಅಂತೆಯೇ, ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಹಿತಾಲಿ ಪಿ ಶೆಟ್ಟಿ ಡಿಸ್ಕಸ್ ತ್ರೋ ನಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಪ್ರಸನ್ನ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿಯ ಮಗಳಾಗಿರುತ್ತಾಳೆ. ಈ ಇಬ್ಬರೂ ವಿದ್ಯಾರ್ಥಿಗಳು ಮಧ್ಯಪ್ರದೇಶದ ಸಾತ್ನಾ ದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here