ಚಾರ್ವಾಕ ಎಣ್ಮೂರು ಗೌರಮ್ಮ ಅವರ ಶ್ರದ್ಧಾಂಜಲಿ ಸಭೆ

0

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಂಘದ ಮಾಜಿ ಕಾರ್ಯದರ್ಶಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಪಶು ಚಿಕಿತ್ಸಕ ತಿಮ್ಮಪ್ಪ ಗೌಡ ಎಣ್ಮೂರು ಇವರ ಮಾತೃಶ್ರೀ ಗೌರಮ್ಮ ಇವರ ಶ್ರದ್ಧಾಂಜಲಿ ಕಾರ್ಯಕ್ರಮವು ತಿಮ್ಮಪ್ಪ ಗೌಡರ ಸ್ವಗೃಹದಲ್ಲಿ ನಡೆಯಿತು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪೂರ್ವಾಧ್ಯಕ್ಷರು, ಖ್ಯಾತ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಇವರು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇವರ ತಾಯಿ ಪೂವಕ್ಕ ಕರಂದ್ಲಾಜೆ, ಗೌರಮ್ಮರವರ ಸಹೋದರ ಕೀಲೆ ಕೊರಗಪ್ಪ ಗೌಡ, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಎಂ.ಎನ್ ಗೌಡ ಕಾಣಿಯೂರು, ಬೇಬಿ ಉಪಸ್ಥಿತರಿದ್ದರು. ತಿಮ್ಮಪ್ಪ ಗೌಡ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸವಣೂರು ಕ್ಲಸ್ಟರ್ ಸಿ.ಆರ್.ಪಿ ಜಯಂತ್ ವೈ ನಿರೂಪಿಸಿದರು.

LEAVE A REPLY

Please enter your comment!
Please enter your name here