ಹಾರಾಡಿ ಶಾಲೆಯ ಪೃಥ್ವಿಕಾಳಿಗೆ ರಾಷ್ಟ್ರಮಟ್ಟದ ”ಪುಟ್ಟ ಕಲಾವಿದ” ಪ್ರಶಸ್ತಿ

0

ಪುತ್ತೂರು : ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ, ಹಾಗು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಇದರ ಆಶ್ರಯದಲ್ಲಿ ನಡೆದ ರಾಷ್ಟಮಟ್ಟದ ಮಕ್ಕಳ ಚಿತ್ರ ಕಲೋತ್ಸವ “ಚಿಣ್ಣರ ಚಿತ್ರ ಚಿತ್ತಾರ- 2023-24” ಇದರಲ್ಲಿ ಹಾರಾಡಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಪೃಥ್ವಿಕಾ ಡಿ. ರವರ ಕಲಾಕೃತಿ “ಪುಟ್ಟ ಕಲಾವಿದ” ಪ್ರಶಸ್ತಿಗೆ ಭಾಜನವಾಗಿದೆ.

ಈ ಗೌರವವು ಪ್ರಶಸ್ತಿ ಫಲಕ ಹಾಗು ಪ್ರಖ್ಯಾತ ಚಿತ್ರ ಕಲಾವಿದ ಟಿ.ಪಿ ಅಕ್ಕಿ ಅವರ ಹೆಸರಿನಲ್ಲಿ ನೀಡಲಾಗುವ ಮೂರ್ತಿ ಶಿಲ್ಪವನ್ನು ಒಳಗೊಂಡಿದೆ. ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here