ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು: ಪುರಾತನ ಪ್ರಸಿದ್ದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.6ರಿಂದ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಷಷ್ಠಿ ಮಹೋತ್ಸವಕ್ಕೆ ನ.30ರಂದು ಗೊನೆ ಮುಹೂರ್ತ ನೆರವೇರಿತು.


ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿದ ಬಳಿಕ ದೇವಸ್ಥಾನದ ಬಳಿಯ ತೋಟದಲ್ಲಿ ಗೊನೆ ಕಡಿಯಲಾಯಿತು. ಹಿರಿಯರಾದ ಸದಾಶಿವ ಮೊಡಂಬಡಿತ್ತಾಯ ಗೊನೆ ಕಡಿದರು. ಅರ್ಚಕ ಪೂಜಾ ವಿಧಿ ವಿಧಾನ ನೆರವೇರಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ ಸುಲೋಚನ ಪಿ.ಕೆ., ಉತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಕಚೇರಿ ವ್ಯವಸ್ಥಾಪಕ ಪ್ರಶಾಂತ್, ಗಣೇಶ್ ಗೌಡ ನೈತ್ತಾಡಿ, ಶೇಖರ ಗೌಡ, ರಕ್ಷಿತ್ ನಾಕ್, ಪೂವಪ್ಪ, ಲೋಕೇಶ್ ಗೌಡ ಮುಕ್ರಂಪಾಡಿ, ಶೀನಪ್ಪ ಗೌಡ ಮುಕ್ರಂಪಾಡಿ, ಸೂರಪ್ಪ ಗೌಡ, ಲೋಕೇಶ್ ಗೌಡ ನೈತ್ತಾಡಿ, ಎಂ.ರಾಧಾಕೃಷ್ಣ ಮುಕ್ರಂಪಾಡಿ, ಮಹೇಶ್ ಕಾವೇರಿಕಟ್ಟೆ, ರಾಜೀವ ಪೂಜಾರಿ, ಯೋಗೀಶ್ ದೇವಾಡಿಗ ಮರೀಲ್ ಹಾಗೂ ದಯಾನಂದ ಅತ್ತಾಳ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here