ಕಲಾ ಕ್ಷೇತ್ರದ ಸಾಧಕರಿಗೆ ಬಿರುದು ನೀಡಿ ಸನ್ಮಾನ – ಉಚಿತ ನಾಟಕ ಪ್ರದರ್ಶನ
ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿ ಎರಡು ಕಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾಯಿ ಕಲಾವಿದೆರ್ ಕುಡ್ಲ ಇವರ ನೇತೃತ್ವದ” ಮೋಹಿನಿ” ಕೌಟುಂಬಿಕ ಕುತೂಹಲಭರಿತ ತುಳು ನಾಟಕ ಇದರ ಸಂಭ್ರಮಾಚರಣೆಯು ಮಾ.8 ರಂದು ಸಂಜೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಇದೇ ಸಂದರ್ಭ ಕಲಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಅವರಿಗೆ ಬಿರುದು ನೀಡಿ ಗೌರವಿಸಲಾಯಿತು. ಕಲಾ ಪ್ರೇಕ್ಷರಿಗೆ ನಾಟಕವನ್ನು ಉಚಿತವಾಗಿ ಪ್ರದರ್ಶನ ಮಾಡಲಾಯಿತು.

ಕಡಬ ಶ್ರೀ ಮೂಕಾಂಬಿಕಾ ಕ್ಷೇತ್ರ ಪಾಲ್ತಿಮಾರು ಇದರ ಕೇಶವ ಪಂಡಿತ್ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಮೋಹಿನಿ ತುಳು ನಾಟಕದ ಸಂಭ್ರಮಾಚರಣೆಯ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಬಡಗನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ, ಚಿತ್ರನಟ, ಕಲಾವಿದ ಚೇತನ್ ಮಾಣಿ ಅವರು ಮೋಹಿನಿ ನಾಟಕ ತಂಡದಿಂದ ಯಶಸ್ವಿಯಾಗಿ ಪ್ರದರ್ಶನ ಮೂಡಿ ಬರಲಿ. ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಯಶಸ್ವಿ ಪ್ರದರ್ಶನ ಕಾಣಲಿ ಪ್ರತಿ ಊರಲ್ಲೂ ತಂಡಕ್ಕೆ ಪ್ರದರ್ಶನದ ಅವಕಾಶ ಸಿಗಲಿ ಎಂದು ಹಾರೈಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೇಡೆಕರ್, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ಶುಂಠಿಕೊಪ್ಪದ ಸರೋಜಿನಿ ರೈ ಅರ್ಬೈಲ್, ಅಶ್ವಿನ್ ರಾವ್, ಬಿಳಿನೆಲೆ ಮೆಸ್ಕಾಂ ಶಾಖಾಧಿಕಾರಿ ಮನೋಜ್ ಕುಮಾರ್ ರೈ, ವಿಶ್ವನಾಥ್ ಶೇಟ್ಟಿ ಕಿದೂರು ಜಾಲು, ಸಾಮ್ರಾಟ್ ಪಿವಿಸಿ ಪೈಪ್ ಇಂಡಸ್ಟ್ರೀಸ್ನ ಅಮೃತ್ ಎ.ವಿ, ಪುತ್ತೂರು ವಿಭಾಗ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ, ಶರಬರೀನಾಥ್ ಕೊಯಿಲ ಬಡಗನ್ನೂರು, ಪೆರಾಬೆ ಗ್ರಾ.ಪಂ ಮಾಜಿ ಅಧ್ಯಕ್ಷ ಮೋಹನ್ದಾಸ್ ರೈ ಪರಾರಿಗುತ್ತು, ಸವಿತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ- ಬಿರುದು ನೀಡಿ ಅಭಿನಂದನೆ:
ಸಕಲ ಕಲಾವಲ್ಲಭ ಕಡಬ ತಾಲೂಕು ಆಲಂಕಾರಿನ ಶ್ರೇಯಾ ಆಚಾರ್ಯ ಅವರಿಗೆ ಸಾಯಿಕಂಟ ಸಿರಿ ಬಿರುದು, 2500 ನಾಟಕಗಳಲ್ಲಿ ಸ್ತ್ರೀ ಪಾತ್ರದಾರಿಯಾಗಿ ರಂಜಿಸಿದ ದಯಾನಂದ ಕುಂತೂರು ಅವರಿಗೆ ಸಾಯಿ ನವರಸ ಕಲಾರತ್ನ ಬಿರುದು, ಹಲವು ನಾಟಕಗಳನ್ನು ನಿರ್ದೇಶಿಸಿದ ನಿರ್ದೇಶಕ ಸುನಿಲ್ ಮಾಲ ಅವರಿಗೆ ಸಾಯಿ ರಂಗ ಮಾಂತ್ರಿಕ ಮಹರ್ಷಿ ಬಿರುದು, ಹಲವು ನಾಟಕ, ಚಲನಚಿತ್ರಕ್ಕೆ ಧ್ವನಿ ಮುದ್ರಣ ನೀಡುತ್ತಿರುವ ಚಿದಾನಂದ ಕಡಬ ಅವರಿಗೆ ಸಾಯಿ ಸಂಗೀತ ಮಾಂತ್ರಿಕ ಬಿರುದು ನೀಡಿ ಗೌರವಿಸಲಾಯಿತು. ನಾಟಕ ರಚನೆಗಾರ ಮತ್ತು ಕಲಾವಿದನಾಗಿ ಸಾಯಿ ಕಲಾವಿದೆರ್ ಸಂಸ್ಥೆಯ ಸ್ಥಾಪಕ ಶಿವಕುಮಾರ್ ರೈ ಪುತ್ತೂರು, ಸಂಗೀತ ನಿರ್ದೇಶಕ ಗೌತಮ್ ಶೆಟ್ಟಿ, ಕುಡ್ತಮುಗೇರು ರಾಜಶೇಖರ್ ಶೆಟ್ಟಿ, ಯದು ವಿಟ್ಲ ಅವರನ್ನು ಅಭಿನಂದಿಸಲಾಯಿತು. ಮೋಹಿನಿ ನಾಟಕದ ಕಲಾವಿದರು, ತಾಂತ್ರಿಕ ವರ್ಗದವರು, ಪ್ರಸಾದನ, ರಂಗಾಲಂಕಾರದವರನ್ನು ಗೌರವಿಸಲಾಯಿತು. ನಿರೀಕ್ಷಾ ವಿಟ್ಲ, ವಿಜಯ ಕುಮಾರ್ ವಿಟ್ಲ, ರಾಮಕೃಷ್ಣ ಪಡುಮಲೆ, ಹರೀಶ್ ಸನ್ಮಾನ ಪತ್ರ ವಾಚಿಸಿದರು. ನಾಟಕದ ಸಾರಥ್ಯ ವಹಿಸಿದ ಪ್ರಕಾಶ್ ರೈ ಮರುವಂತಿಲ, ಸಾಹಿತ್ಯ ಮತ್ತು ರಚನಾಕಾರ ಶಿವಕುಮಾರ್ ರೈ ಪುತ್ತೂರು, ಕಲಾವಿದರಾದ ವಿಜಯಕುಮಾರ್, ಜಿತೇಶ್ ಮಂಗಳೂರು, ರಾಮಕೃಷ್ಣ ಪಡುಮಲೆ ವಿವಿಧ ಕಾಯಕ್ರಮ ನಿರ್ವಹಿಸಿದರು. ವಾಣಿ ವಂದಿಸಿದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.



ಮೋಹಿನಿ ನಾಟಕವು ನಾಟಕವು ವಿಭಿನ್ನವಾಗಿ ಮೂಡಿ ಬಂದಿದೆ. ನಾಟಕವು ಕೌಟುಂಬಿಕವಾಗಿ ಎಲ್ಲರನ್ನು ಜೊತೆಯಾಗಿ ಕರೆದೊಯ್ಯಲಿದೆ. ಉತ್ತಮ ತಾಂತ್ರಿಕತೆ ಮತ್ತು ಕಲಾವಿದರು ನಾಟಕವನ್ನು ಹೆಚ್ಚು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಮಹಾಲಿಂಗೇಶ್ವರ ದೇವರು ಹರಸಲಿ ಎಂದು ಕಾರ್ಯಕ್ರಮ ನಿರೂಪಕರು ತಿಳಿಸಿದರಲ್ಲದೆ ಈ ನಾಟಕವನ್ನು ತಮ್ಮ ತಮ್ಮ ಊರಿನಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಿ. ಅದಕ್ಕಾಗಿ ಮೊಬೈಲ್ ಸಂಖ್ಯೆ 7676587097, 9605464798, 8150049327 ಅನ್ನು ಸಂಪರ್ಕಿಸುವಂತೆ ವಿನಂತಿಸಿದರು.
