ಬಡಗನ್ನೂರು :ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ ಬಡಗನ್ನೂರು ಇಲ್ಲಿನ ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು ಹಾಗೂ ದಾನಿಗಳಾದ ನಾರಾಯಣ ರೈ ಕುದ್ಕಾಡಿ ಇವರು ಕೊಡುಗೆಯಾಗಿ ನೀಡಿರುವ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಜೂ. 5 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾರಾಯಣ ರೈ ಕುದ್ಕಾಡಿ ಇವರು ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ಉಪಾಧ್ಯಕ್ಷ ಶ್ರೀಧರ ನಾಯ್ಕ ನೇರ್ಲಂಪಾಡಿ, ಕೋಶಾಧಿಕಾರಿ ಸುಬ್ರಾಯ ನಾಯಕ್ ಮೇಗಿನಮನೆ, ಸದಸ್ಯರಾದ ರಾಜೇಶ್ ರೈ ಮೇಗಿನಮನೆ , ಶೋಭಾ ಕುದ್ಕಾಡಿ, ಎಸ್. ಡಿ. ಯಂ. ಸಿ ಸದಸ್ಯರಾದ ಸುಲೋಚನಾ ನೇರ್ಲಂಪಾಡಿ, ಲತಾ ಕುಮಾರಿ ಕಟ್ಟಾವು, ಗಿರೀಶ್ ಗೌಡ ಕನ್ನಯ, ಹರಿಣಾಕ್ಷಿ ಕಟ್ಟಾವು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯಗುರು ಹರಿಣಾಕ್ಷಿ ಎ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿ. ಟಿ. ಪಿ. ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು. ಗೌರವ ಶಿಕ್ಷಕಿಯರಾದ ಚೖೆತ್ರ, , ಮಧುಶ್ರೀ, ಅತಿಥಿ ಶಿಕ್ಷಕಿಯರಾದ ಸೌಮ್ಯ, ಸರಿತಾ ಸಹಕರಿಸಿದರು.
85 ಮಕ್ಕಳಿಗೆ ಪುಸ್ತಕ ವಿತರಣೆ
1ರಿಂದ 8ನೇ ತರಗತಿ ವರೆಗಿನ ಸಮಾರು 85 ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 6 ನೋಟ್ ಪುಸ್ತಕದಂತೆ, 85 ಮಕ್ಕಳಿಗೆ ಸಮಾರು 510 ಪುಸ್ತಕವನ್ನು ಕೊಡುಗೆಯಾಗಿ ನೀಡಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿದರು.