ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿಶ್ವ ಯೋಗ ದಿನಾಚರಣೆ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಭ್ಯಾಸವನ್ನು ನಡೆಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯೋಗ ತರಬೇತುದಾರ ಚಂದ್ರಶೇಖರ್ ಮಾತನಾಡಿ  “ಯೋಗ ಭಾರತೀಯ ಸಂಪತ್ತು. ಓಂಕಾರದಿಂದ ಎಲ್ಲಾ ಮನಸ್ಸುಗಳು ಹೇಗೆ ಒಗ್ಗೂಡುವುದೋ ಅದೇ ರೀತಿ ಯೋಗ ಎನ್ನುವುದು ಇಡೀ ಜಗತ್ತನ್ನೇ ಕುಟುಂಬದಂತೆ ಜೋಡಿಸುತ್ತಿದೆ. 24 ಗಂಟೆಯ ದಿನಚರಿಯೇ ಯೋಗ. ಪ್ರತಿಯೊಬ್ಬ ಭಾರತೀಯನೂ  ದಿನದಲ್ಲಿ ಯೋಗದ ಸ್ವಅಭ್ಯಾಸ ಮಾಡುವುದರಿಂದ ದಿನದ ಎಲ್ಲಾ ಚಟುವಟಿಕೆಗಳನ್ನು ಸುಸ್ಥಿತಿಯಲ್ಲಿಡಬಹುದು. ಸ್ವಪ್ರೇರಣೆಯನ್ನು ಹೆಚ್ಚು ಗೊಳಿಸಲು  ಒಂದು  ಆಚರಣೆಗೋಸ್ಕರ ಸ್ಮರಣೆ ಮಾಡುವ ದಿನವೇ ವಿಶ್ವ ಯೋಗ ದಿನ . ಯೋಗಾಭ್ಯಾಸ ನಮ್ಮ ಉಪಯೋಗಕ್ಕೆ ಬರಲಿ ಹಾಗೂ ಸ್ವಅಭ್ಯಾಸಕ್ಕೆ ವೇಗವನ್ನು ಕೊಡಲಿ ಎಂದು ಶುಭ ಹಾರೈಸಿದರು.  

 ಕಾರ್ಯಕ್ರಮದ ಅಧ್ಯಕ್ಷ, ಕಾಲೇಜಿನ ಸಂಚಾಲಕ ಮಹಾದೇವಶಾಸ್ತ್ರಿ ಮಣಿಲಾ ಮಾತನಾಡುತ್ತಾ “ಯೋಗ ಎನ್ನುವುದು ನಾವು ಅಭ್ಯಾಸ ಮಾಡಿ ಅನುಭವಿಸುವ ವಿದ್ಯೆ .ಯೋಗವನ್ನು ನಿರಂತರವಾಗಿ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದರು.

 ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ , ಸದಸ್ಯರಾದ ರವಿ ಮುಂಗ್ಲಿ ಮನೆ ಭಾಗವಹಿಸಿದ್ದರು.

 ಪ್ರಾಂಶುಪಾಲರಾದ ಮುರಳೀಧರ್ ಯಸ್ ಅತಿಥಿಗಳನ್ನು ಸ್ವಾಗತಿಸಿ” ಯೋಗ ಎಂಬುದು ನಮ್ಮ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸಾಧನ.  ಮಹರ್ಷಿ ಪತಂಜಲಿಯಿಂದ ಪರಿಚಯಿಸಲ್ಪಟ್ಟ ಯೋಗ ಜೀವಾತ್ಮವನ್ನು ಪರಮಾತ್ಮನ ಜೊತೆಗೆ ಸೇರಿಸುವ ಪ್ರಮುಖ ಸಾಧನವಾಗಿದೆ ಯೋಗಕ್ಕೆ ವಯಸ್ಸಿನ ಅಂತರವಿಲ್ಲ ಯೋಗಭ್ಯಾಸ ಮಾಡಿ ನಾವೆಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳೋಣ” ಎಂದು  ನುಡಿದರು.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಸಿವಿಲ್ ವಿಭಾಗದ ಉಪನ್ಯಾಸಕಿ ವೀಣಾ ಸಿ ಧನ್ಯವಾದವನ್ನು ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ  ಉಪನ್ಯಾಸಕೇತರ ವರ್ಗದವರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here