ಒಡಿಯೂರಿನಲ್ಲಿ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸಿಬ್ಬಂದಿಗಳ ಹೊರಾಂಗಣ ಆಟೋಟ ಸ್ಪರ್ಧೆ ಉದ್ಘಾಟನೆ

0

ತಿಳಿದು ಬೆರೆತು ಬದುಕಿದರೆ ಬದುಕು ಸಾಕ್ಷಾತ್ಕಾರ: ಒಡಿಯೂರು ಶ್ರೀ

ವಿಟ್ಲ: ಸಂಭ್ರಮದಲ್ಲಿ ಎರಡು ರೀತಿಯಾಗಿದೆ. ಹೊರ ಸಂಭ್ರಮ ಇಂದ್ರೀಯಗಳಿಗೆ ಸಂಬಂದಿಸಿದ್ದಾದರೆ. ಒಳ ಸಂಭ್ರಮ  ಆಧ್ಯಾತ್ಮಿಕಕ್ಕೆ ಸಂಬಂಧಿಸಿದ್ದಾಗಿದೆ. ದೇಶದೆಲ್ಲೆಡೆ ವಿವಿಧ ರೀತಿಯ ಸ್ಪರ್ದೆಗಳು ನಡೆಯುತ್ತಿದೆ. ಸ್ಪರ್ಧೆ ಯಾವಾಗಲೂ ಆರೋಗ್ಯಪೂರ್ಣವಾಗಿರಬೇಕು.ತಿಳಿದು ಬದುಕಿದರೆ ಬದುಕು ಬಂಗಾರ. ತಿಳಿದು ಬೆರೆತು ಬದುಕಿದರೆ ಬದುಕು ಸಾಕ್ಷಾತ್ಕಾರ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಅಂಗವಾಗಿ ಜೂ.22ರಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮೈದಾನದಲ್ಲಿ  ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸಿಬ್ಬಂದಿಗಳಿಗೆ ನಡೆಸಿದ ಹೊರಾಂಗಣ ಆಟೋಟ ಸ್ಪರ್ಧೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು‌. ಸಾಮರಸ್ಯ ಎಲ್ಲೆಡೆ ಮೂಡಬೇಕು. ತ್ಯಾಗ ಮನೋಭಾವ ನಮ್ಮಲ್ಲಿರಬೇಕು. ಸ್ಪರ್ಧಾತ್ಮಕ ಬದುಕು ಎಲ್ಲರಲ್ಲಿದೆ. ಧರ್ಮದ ನೆರಳು ನಮಗೆ ಬೇಕು. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಂಸ್ಕಾರ ಕಲಿಸುವ ಥಾಣಗಳಾಗಬೇಕು. ನಿಜಾರ್ಥದ ಬದುಕಿನ ಅಂಗಳದಲ್ಲಿ ನಾವು ವಿಜಯಿಯಾಗಬೇಕು ಎಂದರು. ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಜನ್ಮದಿನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಎ. ಸುರೇಶ್ ರೈ, ಜನ್ಮದಿನೋತ್ಸ ಸಮಿತಿ ಉಪಾಧ್ಯಕ್ಷರಾದ  ಗಣಪತಿ ಭಟ್ ಸೇರಾಜೆ, ಕ್ರೀಡಾಕೂಟದ ಸಂಚಾಲಕರಾದ ಶಶಿಧರ ಶೆಟ್ಟಿ ಜಮ್ಮದ ಮನೆ,  ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ವೇಣುಗೋಪಾಲ್ ಮಾರ್ಲ, ಶ್ರೀ ಗುರುದೇವ ಐಟಿಐ ನ ಪ್ರಾಂಶುಪಾಲರಾದ ಪ್ರವೀಣ್, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಹಾಸ ಶೆಟ್ಟಿ ಅಳಿಕೆ, ರವೀಂದ್ರ ಶೆಟ್ಟಿ ಚೆಂಡುಕಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರದ್ಧಾ ಪ್ರಾರ್ಥಿಸಿದರು. ಗ್ರಾಮೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು‌. 

ಬಳಿಕ ಮಹಿಳೆಯರಿಗೆ-ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಿತು. 

LEAVE A REPLY

Please enter your comment!
Please enter your name here