ಎಸ್‌ಸಿಡಿಸಿಸಿ ಬ್ಯಾಂಕ್ ಈಶ್ವರಮಂಗಲ ಶಾಖೆಯಿಂದ ಗ್ರಾಹಕ ರಾಮಚಂದ್ರರವರಿಗೆ ವಿಮಾ ಸೌಲಭ್ಯದ ಮೊತ್ತ ಹಸ್ತಾಂತರ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಈಶ್ವರಮಂಗಲ ಶಾಖೆಯಿಂದ ಗ್ರಾಹಕರಾದ ರಾಮಚಂದ್ರರವರಿಗೆ ಉಳಿತಾಯ ಖಾತೆ ಆಧಾರಿತ ವಿಮಾ ಸೌಲಭ್ಯದ ಮೊತ್ತ ನೀಡಲಾಯಿತು. ಶಾಖಾ ವ್ಯವಸ್ಥಾಪಕ ದಾಮೋದರ ಕೇನಾಜೆರವರು ಮೊತ್ತವನ್ನು ಶಾಖಾ ಕಛೇರಿಯಲ್ಲಿ ಹಸ್ತಾಂತರಿಸಿದರು.

ಶಾಖಾ ಸಿಬ್ಬಂದಿಗಳಾದ ಪ್ರಸನ್ನ ಎ.ಎಂ, ಮನೋಜ್ ಕುಮಾರ್ ಕೆ ಮತ್ತು ಉಮಾ ಸಿ.ಎಚ್ ಹಾಗೂ ಸೌಮ್ಯ ಜೆ. ಉಪಸ್ಥಿತರಿದ್ದರು. ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿ ನಿರಂತರವಾಗಿ ರೂ.20000 ಮೊತ್ತ ಅಂತಿಮ ಶಿಲ್ಕು ಇರುವ ಗ್ರಾಹಕರಿಗೆ ಅಪಾಘಾತ ಸಂಭವಿಸಿದಲ್ಲಿ ನೀಡುವ ವಿಮಾ ಯೋಜನೆ ಇದಾಗಿದ್ದು ಗ್ರಾಹಕರಾದ ರಾಮಚಂದ್ರರವರ ಮೇಲೆ ಮನೆಯ ಫ್ಯಾನ್ ಕಳಚಿ ಬಿದ್ದು ಗಾಯಗೊಂಡು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು.

LEAVE A REPLY

Please enter your comment!
Please enter your name here