ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ಧ್ವನಿವರ್ಧಕ ಕೊಡುಗೆ

0

ನಿಡ್ಪಳ್ಳಿ;ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ನಿವೃತ್ತ ಶಿಕ್ಷಕ ದಿವಂಗತ ಕೃಷ್ಣ ನಾಯ್ಕ ವೈ ಪಟ್ಟೆ ಬಡಗನ್ನೂರು ಇವರ ಸ್ಮರಣಾರ್ಥ ಇವರ ಧರ್ಮಪತ್ನಿ ಪಟ್ಟೆ ಶ್ರೀಕೃಷ್ಣ  ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಯಮುನಾ.ಕೆ ಇವರು ಸುಮಾರು ರೂ. 25,000 ಮೌಲ್ಯದ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ಕಾರ್ಯದರ್ಶಿ ಮಂಜುನಾಥ ರೈ, ಸದಸ್ಯ ರಮೇಶ ಆಚಾರ್ಯ,ಅರ್ಚಕ ನವೀನ್ ಹೆಬ್ಬಾರ್, ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ರೇಖಾ ನಾಗರಾಜ್ ಪಟ್ಟೆ, ಶ್ರೀ ಶಾಂತದುರ್ಗಾ ಭಕ್ತ ವೃಂದ  ಮತ್ತೀತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here