ಉಜಿರೆ ಶ್ರೀ .ಧ. ಮಂ ಸಿಬಿಎಸ್ ಇ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾಗೆ ರಾಜ್ಯ ಮಟ್ಟದ ಕರಾಟೆ ಕೊಡಗು ಕಪ್ ನ ಕಟಾದಲ್ಲಿ ಪ್ರಥಮ ಸ್ಥಾನ

0

ಬೆಳ್ತಂಗಡಿ: ಅಕ್ಟೋಬರ್ 9 ರಂದು ಕುಶಾಲನಗರದ ರೈತ ಸಭಾ ಭವನದಲ್ಲಿ ಕಲಾಭೂಮಿ ಮಾರ್ಷಲ್ ಆರ್ಟ್ಸ್ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಕೊಡಗು ಕಪ್ ನಲ್ಲಿ ಬೆಳ್ತಂಗಡಿ ವೈಎಸ್ ಕೆ  ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಇವರ ಶಿಷ್ಯೆ ದೀಕ್ಷಿತಾ . ಕೆ ಇವರು 10 ವರ್ಷದೊಳಗಿನ ವಿಭಾಗದ ಕಟಾದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದು ಒಂದು ಪ್ರಥಮ, ಒಂದು ತೃತೀಯ ಶ್ರೇಣಿಯ ಟ್ರೋಫಿ ಯನ್ನು ಪಡೆದುಕೊಂಡಿರುತ್ತಾರೆ.

ಇವರು ಬೆಳ್ತಂಗಡಿ ಪೋಲಿಸ್ ಹೆಡ್ ಕಾನ್ಸ್ಟೆಬಲ್ ಕನಕರಾಜ್. ಆರ್ ಮತ್ತು ಸುಮತಿ. ಕೆ ಇವರ ಪುತ್ರಿಯಾಗಿದ್ದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್ ಇ ಶಾಲೆಯ 4 ನೇ ತರಗತಿಯ ಬಿ ವಿಭಾಗದ ವಿದ್ಯಾರ್ಥಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here